ಕಳಸ ಲೈವ್ ವರದಿ
ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತನೂಡಿ ಪಂಚಾವಟಿ ಎಸ್ಟೇಟ್ ಮಾಲೀಕರಾದ ಟಿ. ಎಸ್ ಜಗದೀಶ್ ಹೆಗಡೆಯವರು ಉಚಿತ ಅಂಬ್ಯುಲೆನ್ಸ್ ನೀಡಿದ್ದಾರೆ.
ಬಾಳೆಹೊಳೆಯ ಸಾರ್ವಜನಿಕರಿಗೆ ತುರ್ತು ಅಗತ್ಯಕ್ಕಾಗಿ ಅಂಬ್ಯುಲೆನ್ಸ್ ಬೇಕು ಎಂದು ಆಟೋ ಮಾಲಕ ಚಾಲಕರು ಹಾಗೂ ಸಾರ್ವಜನಿಕರು ಜಗದೀಶ್ ಹೆಗಡೆಯವರ ಬಳಿ ಮನವಿ ಮಾಡಿಕೊಂಡಿದ್ದರು.ಮನವಿಗೆ ಸ್ಪಂದಿಸಿ ಅಂಬ್ಯುಲೆನ್ಸ್ ನೀಡಿದ್ದಾರೆ.
ಈ ಹಿಂದಿನಿಂದಲೂ ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ, ಸಂಘ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡಿದ್ದಾರೆ. ಬಾಳೆಹೊಳೆ ವೃತ್ತಕ್ಕೆ ಸಿ.ಸಿ.ಟಿವಿ ಕೊಡುಗೆಯನ್ನು ನೀಡಿದ್ದರು. ಇದೀಗ ಅಂಬ್ಯುಲೆನ್ಸ್ ನೀಡಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.