ಕಳಸ ಲೈವ್ ವರದಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಸಣಿಗೆ ಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮನ್ನು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂತೋμï ನಡೆಸಿಕೊಟ್ಟರು. ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಪೆÇೀಷಕರು, ಗ್ರಾಮಸ್ಥರು , ಹಳೇ ವಿದ್ಯಾರ್ಥಿ ಸಂಘದವರು, ಶಾಲಾ ಶಿಕ್ಷಕ ವೃಂದ, ಅಂಗನವಾಡಿ ಸಿಬ್ಬಂದಿಯವರು ಹಾಗೂ ಗ್ರಾಮದ ಹಿರಿಯರು ಹಾಗೂ ದಾನಿಗಳಾದ ವರ್ಧಮಾನಯ್ಯ ರವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್ ಮಾತನಾಡಿ ನಾವೆಲ್ಲರೂ ಇಂದು ನೆಮ್ಮದಿಯಿಂದ ಇರಲು ಮುಖ್ಯ ಕಾರಣ ನಮ್ಮ ದೇಶ ಕಾಯುವ ಸೈನಿಕರು .ಅವರಿಗೆ ನಾವು ಯಾವಾಗಲೂ ಋಣಿಯಾಗಿರಬೇಕೆಂದು ಹೇಳಿದರು.
ಹಾಗೆಯೇ ಊರಿನ ಹಿರಿಯರಾದ ವರ್ಧಮಾನಯ್ಯ ಮಾತನಾಡುತ್ತ ದೇಶದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪಾತ್ರ ತುಂಬಾ ಮಹತ್ವದ್ದಾಗಿದೆ. ಯುವಕರು ತಮ್ಮನ್ನು ತಾವು ಒಳ್ಳೆಯ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಶಾಲಾ ಮಕ್ಕಳು ಮಾಡಿದ ಭಾಷಣ ತುಂಬಾ ಪರಿಣಾಮಕಾರಿಯಾಗಿತ್ತು. ಮಕ್ಕಳು ಮಹಾ ಪುರುಷರ ವೇಷ ಭೂಷಣವನ್ನು ತೊಟ್ಟು ಅವರ ಸ್ಫೂರ್ತಿ ದಾಯಕ ಮಾತುಗಳನ್ನು ತಮ್ಮ ಮಾತು ಮತ್ತು ಅಭಿನಯದ ಮೂಲಕ ತಿಳಿಸಿಕೊಟ್ಟರು. ಈ ಕಾರ್ಯಕ್ರಮ ವನ್ನು ಶಾಲಾ ಶಿಕ್ಷಕ ವೃಂದ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
Related Stories
September 6, 2024