ಕಳಸ ಲೈವ್ ವರದಿ
ಕಳಸ ತಾಲೂಕು ಆಡಳಿತದಿಂದ ನಾಮಕಾವಸ್ಥೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಲಾಗಿದೆ ಎಂದು ಕಳಸ ಗ್ರಾಪಂ ಉಪಾಧ್ಯಕ್ಷ ರಂಗನಾಥ್ ಆರೋಪ ಮಾಡಿದ್ದಾರೆ.
ಪತ್ರಿಕೆಯಲ್ಲಿ 9 ಗಂಟೆ ಸಮಯವನ್ನು ನಿಗದಿ ಮಾಡಿದರೂ ಕೂಡ 8.55 ಕ್ಕೆ ಧ್ವಜಾರೋಹಣ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಬಂದ ಪಂಚಾಯಿತಿ ಅಧ್ಯಕ್ಷರಿಗೂ ಕೂಡ ಧ್ವಜಾರೋಹಣದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಸಮಯಕ್ಕೆ ಸರಿಯಾಗಿ ಬಂದವರಿಗೆ ಯಾರೀಗೂ ಕೂಡ ಧ್ವಜಾರೋಹಣದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ದ್ವಜ ವಂದನೆ, ಅರಣ್ಯ ಇಲಾಖೆ, ಸ್ಕೌಟ್ ಮತ್ತು ಗೈಡ್ಸ್ ಪೆರೆಡ್, ಪಥ ಸಂಚಲನ, ಯಾವುದನ್ನು ಕೂಡ ಮಾಡದೆ ಕೇವಲ 10 ನಿಮಿಷದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಿ ಮುಗಿಸಲಾಗಿದೆ. ಕಳಸ ಹೊಸದಾಗಿ ತಾಲೂಕು ಕೇಂದ್ರವಾಗಿದೆ. ಕಡೇ ಪಕ್ಷ ಸ್ವಾತಂತ್ರ್ಯ ದಿನಾಚರಣೆಯನ್ನಾದರೂ ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡುವ ಇಚ್ಚಾ ಶಕ್ತಿ ತಾಲೂಕು ಆಡಳಿತಕ್ಕಿಲ್ಲ ಎಂದು ರಂಗನಾಥ್ ಆರೋಪಿಸಿದ್ದಾರೆ.
ಇದಕ್ಕಿಂತ ಮುಂಚಿತವಾಗಿ ಧ್ವಜಾರೋಹಣ ನಡೆದ ಸ್ಥಳದಲ್ಲಿಯೇ ತಾಲೂಕು ದಂಡಾಧಿಕಾರಿಯವನ್ನು ತರಾತುರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿರುವ ಬಗ್ಗೆ ರಂಗನಾಥ್ ಪ್ರಶ್ನೆ ಮಾಡಿದರು. ಮಳೆ ಬರುವ ಸಂಭವವಿತ್ತು ಅದಕ್ಕಾಗಿ ಬೇಗ ಮುಗಿಸಿದ್ದೇವೆ. ನಾನು ಹೊಸಬ ಬಂದಿದ್ದೇನೆ. ನನಗೆ ಇದೆಲ್ಲ ಗೊತ್ತಾಗಲಿಲ್ಲ ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಸ್ಥಳದಲ್ಲಿ ತಹಶೀಲ್ದಾರ್ ಕ್ಷಮೆ ಕೇಳಿದರು.