ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯಿಂದ ಕಳಸ ಕೈಮರ ಜೆಸಿಐ ವೃತ್ತಕ್ಕೆ ಅಳವಡಿಸಿದ್ದ ಸೋಲಾರ್ ದೀಪವನ್ನು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ರಮೆಶ್ ದಡಿಗಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ಯಾವುದೇ ಸಂಸ್ಥೆಯಲ್ಲಿ ಇರಬಹುದು ಆದರೆ ನಮ್ಮ ಅಧಿಕಾರದ ಅವದಿಯಲ್ಲಿ ಸಮಾಜಕ್ಕೆ ನಾವು ಶಾಶ್ವತವಾದ ಯೋಜನೆಗಳನ್ನು ರೂಪಿಸಿ ನಮ್ಮ ಹೆಸರನ್ನು ಶಾಶ್ವತವಾಗಿ ಉಳಿಸುವಂತೆ ನೋಡಿಕೊಳ್ಳಬೇಕು. ಕಳಸ ಜೆಸಿಐ ವೃತ್ತ ನಿರ್ಮಿಸಿ ಅದಕ್ಕೆ ಸೊಲಾರ್ ದೀಪಗಳನ್ನು ಅಳವಡಿಸುವ ಕೆಲಸ ಮಾಡಿದೆ. ಸಂಸ್ಥೆಯಲ್ಲಿ ನಮ್ಮ ಇರುವಿಕೆಯನ್ನು ಕೆಲಸದ ಮುಖಾಂತರ ತೋರಿಸಿಕೊಡಬೇಕು ಎಂದು ತಿಳಿಸಿದರು.
ಕಳಸ ಜೆಸಿಐ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ ಪವರ್ ಫಾಯಿಂಟ್ ಅವರ ಸಹಕಾರದೊಂದಿಗೆ 35 ಸಾವಿರ ವೆಚ್ಚದಲ್ಲಿ ಸೋಲಾರ್ ದೀಪ ಅಳವಡಿಸಲಾಗಿದೆ.ಇದೇ ರೀತಿ ಕೋಟೆಮಕ್ಕಿ ಶಾಲೆಯ ಯನ್ನು ಈಗಾಗಲೇ ದತ್ತು ತೆಗೆದುಕೊಳ್ಳಲಾಗಿದೆ. ಶಾಲೆಗೆ ಟೈಲ್ಸ್, ಬಣ್ಣ ಇನ್ನಿತೆರೆ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಸಿಐ ವಲಯ ನಿರ್ದೇಶಕ ಪ್ರಶಾಂತ್ ಹೆಚ್.ಆರ್, ವಲಯಾಧ್ಯಕ್ಷೆ ಆಶಾ ಜೈನ್, ಕಳಸ ಜೆಸಿಐ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಸುಧಾಕರ್, ವಲಯ ನಿರ್ದೇಶಕ ಪ್ರಜ್ವಲ್ ಜೈನ್, ದಾನಿಗಳಾದ ರಾಮಚಂದ್ರ ಹೆಬ್ಬಾರ್, ಜೆಸಿಐ ಪೂರ್ವಾಧ್ಯಕ್ಷರುಗಳಾದ ಅಶೋಕ್, ಮಹೇಶ್ ಕೆಸಿ. ಬಿ.ಕೆ ಮಹೇಶ್, ಚರಣ್, ಸದಸ್ಯರಾದದ ಸತೀಶ್, ಶಿವಪ್ರಸಾದ್, ಜಯಪ್ರಕಾಶ್, ಮಾರುತೇಶ್ ಇತರರು ಇದ್ದರು.