ಕಳಸ ಲೈವ್ ವರದಿ
ಹಿಂದೆ ಕೂಡು ಕುಟುಂಬದಲ್ಲಿ ಬದುಕುವಂಥ ಹೆಣ್ಣು ಮಕ್ಕಳ ಪರಿಸ್ಥಿತಿ ಬಹಳ ಕ್ಲಿಷ್ಟಕರವಾಗಿತ್ತು ಎಲ್ಲದಕ್ಕೂ ಅವಲಂಬಿಸಿ ಬದುಕುವ ತನ್ನ ಯಾವುದೇ ನೋವನ್ನು ಭಾವನೆಗಳನ್ನು ವ್ಯಕ್ತಪಡಿಸದೆ ನಿಸ್ಸಹಾಯಕಳಾಗಿ ಬದುಕುತ್ತಿದ್ದ ಕಾಲವಾಗಿತ್ತು ಎಂದು ಕವಿಯತ್ರಿ ಶ್ರೀಮತಿ ಗೀತಾ ಮಕ್ಕಿಮನೆ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಯಿಂದ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಯೋಗ ಧ್ಯಾನ ಮತ್ತು ಮಾತು ಮಂಥನ ಕಾರ್ಯಕ್ರಮದಲ್ಲಿ ಮಲೆನಾಡ ಮಹಿಳೆಯರ ಒಳತುಡಿತಗಳು ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಅವರು ಮಹಿಳೆ ಸಂಸಾರದ ಬಗ್ಗೆ ಹೊರಗೆ ಎಲ್ಲೂ ಮಾತನಾಡದೆ ಸಂಬಂಧಗಳ ಗೋಪ್ಯತೆಯನ್ನು ಹಾಗೂ ಅತ್ತ ತಾಯಿ ಮನೆಯಿಂದಲೂ ಯಾವುದೇ ರೀತಿಯ ಪೆÇ್ರೀತ್ಸಾಹವಿಲ್ಲದೆ ತನ್ನ ಬದುಕಿನ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ಚಡಪಡಿಸುವಂತಹ ಪರಿಸ್ಥಿತಿಯಾಗಿತ್ತು. ಇಂದಿನಂತೆ ಮಾಧ್ಯಮಗಳು ಇಷ್ಟು ಪ್ರಭದ್ದ ಸ್ಥಿತಿಯಲ್ಲಿ ಇರಲಿಲ್ಲ. ವ್ಯಕ್ತಪಡಿಸುವ ಮಾಧ್ಯಮಗಳು ಇರಲಿಲ್ಲ ಹೀಗೆ ತನ್ನ ಬದುಕನ್ನು ಆಸೆಯನ್ನೆಲ್ಲ ಕಟ್ಟಿಕೊಂಡು ತನ್ನೊಳಗೆ ಅದಮಿ ಕೊಂಡು ತನ್ನ ಜೀವನವನ್ನು ನಡೆಸಬೇಕಾದ ಪರಿಸ್ಥಿತಿ ಹಿಂದೆತ್ತು. ಇಂದು ಅದು ಬಹಳ ಬದಲಾವಣೆಯನ್ನು ಕಂಡಿದೆ ಹಾಗೂ ಮಹಿಳೆಯರಿಗೆ ಉನ್ನತ ಸ್ಥಾನಮಾನವನ್ನು ಸಮಾಜದ ದೊರಕಿಸಿಕೊಟ್ಟಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅ.ರಾ. ಸತೀಶ್ ಚಂದ್ರ ಅವರು ಮಾತನಾಡಿ ಅಂದಿನ ಪರಿಸ್ಥಿತಿ ನಿಜವಾಗಿಯೂ ದುಸ್ತರವಾಗಿದ್ದು ಇಂದು ಅದಕ್ಕೆ ತದ್ವಿರುದ್ಧವಾಗಿದೆ ಇಂದು ಮಲೆನಾಡಿನ ಸಂಸ್ಕಾರಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಇರುವ ಮಹಿಳೆ ಕಾರಣ ಕೂಡು ಕುಟುಂಬವಿಲ್ಲದೆ ಹಾಗೂ ಸಂಬಂಧಗಳ ಕೊರತೆ ಹಾಗೂ ಸಂಸ್ಕಾರಗಳ ಕೊರತೆ ಇವು ಎದ್ದು ಕಾಣುತ್ತಿವೆ ಎಂದು ಹೇಳಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಮ್ತಾಜ್ ಬೇಗಂ, ಯೋಗ ಗುರು ವೈ ಪ್ರೇಮ್ ಕುಮಾರ್, ಕ.ಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ, ಸಾಹಿತಿ ಅ.ರಾ.ರಾಧಾಕೃಷ್ಣ, ಅಜಿತ್ ಪ್ರಸಾದ್, ಸುಮನಾ ಜಯರಾಜ್, ಶರೀಪ್, ಕಲ್ಪನಾ ಅಜಿತ್ ಇತರರು ಇದ್ದರು.