ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹೊರನಾಡು ಬಳಿಯ ಆಡಿನಕೆರೆ ಎಸ್ಟೇಟಿನಲ್ಲಿ ಅರಣ್ಯ ಭೂಮಿ ಒತ್ತುವರಿ ಖುಲ್ಲಾ ಮಾಡುವ ಕೆಲಸ ಇಂದು ಶುರುವಾಗಿದೆ.
ಆಡಿನಕೆರೆಯ ಆಲನ್ ಪ್ರಕಾಶ್ ಪಿಂಟೋ 58 ಎಕರೆ ಅರಣ್ಯ ಮೀಸಲು ಪ್ರದೇಶ ಆಕ್ರಮಿಸಿಕೊಂಡು ಕಾಫಿ ತೋಟ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ಎಸಿಎಫ್ ನ್ಯಾಯಾಲಯ ವಿಚಾರಣೆ ನಡೆಸಿ ತೋಟದ ಮಾಲೀಕ ಆಲನ್ ಪ್ರಕಾಶ್ ಪಿಂಟೋ ಅವರ ವಿರುದ್ಧ ತೀರ್ಪು ನೀಡಿತ್ತು ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ತಿಳಿಸಿದ್ದಾರೆ.
ಭಾನುವಾರ ಅರಣ್ಯ ಇಲಾಖೆಯ ಕಳಸ ವಲಯದ ಸಿಬ್ಬಂದಿ ಆಡಿನಕೆರೆ ತೋಟದ ಕಾಫಿ ಗಿಡಗಳನ್ನು ಕಡಿಯುವ ಕೆಲಸ ಆರಂಭಿಸಿದ್ದಾರೆ. ಕಳಸ ವಲಯದ ವ್ಯಾಪ್ತಿಗೆ ಒಳಪಡುವ 48 ಎಕರೆ ತೆರವು ಮಾಡಲಾಗುತ್ತಿದೆ. ಕೊಪ್ಪ ವಲಯಕ್ಕೆ ಸೇರುವ 10 ಎಕರೆ ಅಲ್ಲಿನ ಸಿಬ್ಬಂದಿ ತೆರವು ಮಾಡುತ್ತಾರೆ ಎಂದು ವಲಯ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.