ಕಳಸ ಲೈವ್ ವರದಿ
ಕಳಸ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಅಚ್ಚು ಕಟ್ಟಾಗಿ ನಡೆಸಲಾಯಿತು.
ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜಪ್ಪ ಪೂಜಾರಿ ನಮ್ಮ ಮನೆಯಲ್ಲಿ ಯಾವಾಗ ನಾವು ಹೆಣ್ಣು ಮಕ್ಕಳಿಗೆಗೆ ಗೌರವವನ್ನು ನೀಡುತ್ತೇವೆಯೋ ಆ ಮನೆಯಲ್ಲಿ ಮಹಾಲಕ್ಷ್ಮೀ ನೆಳೆಸುತ್ತಾಳೆ. ಅವರು ತುಳುವರ ಸಂಸ್ಕøತಿ, ಭಾಷೆ, ಆಹಾರ, ಆಚಾರ-ವಿಚಾರ ಬಹಳ ವಿಶಿಷ್ಟತೆಯಿಂದ ಕೂಡಿದ್ದು, ಈ ವೈವಿದ್ಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಗೌರವಾಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಹಳ ಜೀವನ ನಡೆಸಲು ಬಹಳ ಕಷ್ಟವಾದ ದಿನಗಳಾಗಿದ್ದವು ಆ ಸಂದರ್ಭದಲ್ಲಿ ನೈಸರ್ಗಿಕವಾಗಿ ಬೆಳೆಯುವ ವಸ್ತುಗಳನ್ನೇ ಸೇವಿಸಿ ಜೀವನ ನಡೆಸುತ್ತಿದ್ದರು.ಆದರೆ ಇದು ಆರೋಗ್ಯಕ್ಕೆ ಉತ್ತಮವಾದ ಪದಾರ್ಥವು ಆಗಿತ್ತು.ಇವತ್ತು ತುಳುನಾಡಿನಲ್ಲಿ ಜನಜನಿತ ಆಚರಣೆ ಉಳಿಸಿ, ಬೆಳೆಸುವ ಪ್ರಯತ್ನ ಇದಾಗಿದೆ. ಮುಂದಿನ ಪೀಳಿಗೆ ತುಳುನಾಡ ಸಂಸ್ಕøತಿ ತಿಳಿಯಬೇಕು ಎಂದು ಹೇಳಿದರು.
ಗಮನ ಸೆಳೆದ ವಿವಿಧ ಖಾಧ್ಯಗಳು.
ಆಟಿಡೊಂಜಿ ಕೂಟದಲ್ಲಿ ಮಹಿಳೆಯರು ಮನೆಯಿಂದಲೇ ತಯಾರಿಸಿ ತಂದಿದ್ದ ವಿವಿಧ ಬಗೆಯ ಖಾಧ್ಯಗಳು ಗಮನಸೆಳೆದವು.
ತುಳುನಾಡಿನ ಆಟಿ ಮಾಸದ ಸ್ವಾದಿಷ್ಟ ಖಾಧ್ಯಗಳಾದ ಅರಶಿನ ಕಡುಬು, ಹಲಸಿನ ಹಣ್ಣಿನ ಕಡುಬು, ಪತ್ರೊಡೆ, ಕೋಳಿ ರೊಟ್ಟಿ, ಒಂದೆಲಗ ಚಟ್ನಿ, ಸಿಗಡಿ ಚಟ್ನಿ, ಕೆಸುವಿನ ಪಲ್ಯ, ಕೆಸುವಿನ ಚಟ್ನಿ, ಕಳಲೆ ಪಲ್ಯ, ಶ್ಯಾವಿಗೆ ಕಡುಬು, ಹುರುಳಿ ಚಟ್ನಿ, ತಜಂಕ್ ಪಲ್ಯ, ಹುರುಳಿ ಸಾರು, ಮೊಳಕೆ ಕಾಳು ಪಲ್ಯ ಗಳು ಗಮನ ಸೆಳೆದವು.
ಬಿಲ್ಲವ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಅಲ್ಲದೆ ಇದೇ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಬಿ.ವಿ.ರವಿ ರೈ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಮುಖಂಡರುಗಳಾದ ಶ್ರೀನಿವಾಸ ಪೂಜಾರಿ, ಶೇಖರ ಪೂಜಾರಿ, ರವಿ ಸುವರ್ಣ, ಪೂರ್ಣಿಮಾ ಕಿಶೋರ್, ಹೇಮ ರವಿ ಸುವರ್ಣ,ಜಯಂತಿ ವಾಸುದೇವ್, ಗೌತಮಿ ಇತರರು ಇದ್ದರು.