ಕಳಸ ಲೈವ್ ವರದಿ
ಕಳಸ ಬಂಟರ ಯಾನೆ ನಾಡವರ ಸಂಘದಿಂದ ಭಾನುವಾರ ರೋಟರಿ ಸಭಾ ಭವನದಲ್ಲಿ ಆಟಿಡೊಂಜಿ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾದ ಕಿರಣ್ ಶೆಟ್ಟಿ ನೇತ್ರತ್ವದಲ್ಲಿ ನಡೆಸಲಾಯಿತು. ನಾಲ್ಕನೇ ವರ್ಷದ ಈ ಕಾರ್ಯಕ್ರಮದಲ್ಲಿ ಬಂಟರ ಸಮುದಾಯದ ಮಕ್ಕಳಿಗೆ ವಿದ್ಯಾ ನಿಧಿ ಯೋಜನೆಯಡಿಯಲ್ಲಿ 68 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ 41 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಶಿಸ್ತು ಬದ್ಧ ಅಚ್ಚು ಕಟ್ಟಾದ ಕಾರ್ಯಕ್ರದುದ್ದಕ್ಕೂ ಮಕ್ಕಳ ಹಾಗೂ ಮಹಿಳೆಯ ನೃತ್ಯ ಕಾರ್ಯಕ್ರಮ, ವೈವಿಧ್ಯತೆಯಲ್ಲಿ ಏಕತೆ ಕಾರ್ಯಕ್ರಮದಲ್ಲಿ ಫ್ಯಾನ್ಸಿ ಡ್ರೆಸ್ಸ್ ಮಹಿಳೆಯರ ಕಿರು ನಾಟಕ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಕಳಸ ತಾಲೂಕಿನ ನೂರಾರು ಬಂಟ ಸಮುದಾಯದ ಮಹಿಳೆಯರು, ಪುರುಷರು, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಗಮನ ಸೆಳೆದ ವಿವಿಧ ಖಾಧ್ಯಗಳು.
ಆಟಿಡೊಂಜಿ ಕೂಟದಲ್ಲಿ ಮಹಿಳೆಯರು ಮನೆಯಿಂದಲೇ ತಯಾರಿಸಿ ತಂದಿದ್ದ 36 ಕ್ಕೂ ಹೆಚ್ಚು ಬಗೆಯ ಖಾಧ್ಯಗಳು ಗಮನಸೆಳೆದವು.
ತುಳುನಾಡಿನ ಆಟಿ ಮಾಸದ ಸ್ವಾದಿಷ್ಟ ಖಾಧ್ಯಗಳಾದ ಅರಶಿನ ಕಡುಬು, ಹಲಸಿನ ಹಣ್ಣಿನ ಕಡುಬು, ಪತ್ರೊಡೆ, ಕೋಳಿ ರೊಟ್ಟಿ, ಒಂದೆಲಗ ಚಟ್ನಿ, ಸಿಗಡಿ ಚಟ್ನಿ, ಎಟ್ಟಿ ಚಟ್ನಿ,ಮೊಟ್ಟೆ ಗಸಿ, ಕೆಸುವಿನ ಪಲ್ಯ, ಕೆಸುವಿನ ಚಟ್ನಿ, ಕಳಲೆ ಪಲ್ಯ, ಶ್ಯಾವಿಗೆ ಕಡುಬು, ಹುರುಳಿ ಚಟ್ನಿ, ಹುರುಳಿ ಸಾರು, ಚಿಕನ್ ಪುಳಿ ಮುಂಚಿ, ಚಿಕನ್ ಸುಕ್ಕ, ಅರಶಿನ ಎಲೆ ಕಡುಬು, ತಜಂಕ್ ಪಲ್ಯ, ಮೊಳಕೆ ಕಾಳು ಪಲ್ಯ. ಶ್ಯಾವಿಗೆ, ಇಡ್ಲಿಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಬಂಟರ ಸಂಘದ ಮುಖಂಡರಾದ ಸುರೇಂದ್ರ ಶೆಟ್ಟಿ, ಅರುಣ್ ಶೆಟ್ಟಿ, ಸತೀಶ್ ಶೆಟ್ಟಿ, ಶೇಖರ್ ಶೆಟ್ಟಿ, ಅನಿಲ್ ಶೆಟ್ಟಿ ವಿನಯಕುಮಾರ್ ಶೆಟ್ಟಿ, ನಿರಂಜನ್ ಶೆಟ್ಟಿ, ಗಂಗಾದರ ಶೆಟ್ಟಿ, ಕುಸುಮಾವತಿ ವಿ ಶೆಟ್ಟಿ, ಶುಭ ಶೆಟ್ಟಿ, ನಿಧಿ ವಿ ಶೆಟ್ಟಿ, ಉದಯ ಶೆಟ್ಟಿ ಇತರರು ಇದ್ದರು.