ಕಳಸ ಲೈವ್ ವರದಿ
ವಿದ್ಯಾರ್ಥಿಗಳ ಮಾನಸೀಕ ಸದೃಡತೆಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆ ಅತ್ಯವಶ್ಯಕ ಎಂದು ಮೂಡಿಗೆರೆ ಕ್ಷೇತ್ರದ ಶಾಸಕರಾದ ಶ್ರೀಮತಿ ನಯನಾ ಮೋಟಮ್ಮ ಹೇಳಿದರು.
ಕಳಸದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ 2023-24ನೇ ಸಾಲಿನ ಸಾಂಸ್ಕತಿಕ , ಕ್ರೀಡೆ, ಎನ್ ಎಸ್ ಎಸ್, ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಇತರೆ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಏನೂ ಕೊರತೆ ಇಲ್ಲ ಆದರೆ ಪದವಿ ಮುಗಿದ ಮೇಲೆ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿ ವಿದ್ಯಾರ್ಥಿಗಳು ಇರುತ್ತಾರೆ. ಅದಕ್ಕಾಗಿ ನಾವು ವಿದ್ಯಾರ್ಥಿ ದೆಸೆಯಲ್ಲಿ ಮುಂದಿನ ಗುರಿಯನ್ನು ಇಟ್ಟುಕೊಳ್ಳಬೇಕು. ಪದವಿ ಮುಗಿದ ಮೇಲೆ ಸಾಕಷ್ಟು ಅವಕಾಶಗಳು ಇವೆ ಆದರೆ ಅದನ್ನು ಉಪಯೋಗಿಸಿಕೊಳ್ಳುವ ರೀತಿ ನಮ್ಮಲ್ಲಿರಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಪ್ರಸಾದ್ ಹಿತ್ಲುಮಕ್ಕಿ ಮಾತನಾಡಿ ಕಳಸ ಸರಕಾರಿ ಕಾಲೇಜು ಖಾಸಾಗಿ ಕಾಲೇಜನ್ನು ಮೀರಿಸುವಂತಿದೆ. ಕಾಲೇಜಿಗೆ ಪ್ರತೀ ವರ್ಷ ಹೆಚ್ಚಿನ ಮಕ್ಕಳು ಪ್ರವೇಶಾತಿ ಪಡೆಯುವಂತ ವಾತಾವರಣ ನಿರ್ಮಾಣವಾದರೆ ಕಾಲೇಜು ಇನ್ನಷ್ಟು ಅಭಿವೃದ್ಧಿಗೊಳ್ಳುತ್ತದೆ. ಶಿಕ್ಷಣ ಎಲ್ಲರಿಗೂ ಸಿಗುತ್ತಿದೆ ಆದರೆ ಶಿಕ್ಷಣದಿಂದ ಉದ್ಯೋಗ ಅವಕಾಶಗಳು ಕಡಿಮೆ ಆಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಪೋಷಕರು ಮತ್ತು ಅಧ್ಯಾಪಕರ ವೇದಿಕೆ ಅಧ್ಯಕ್ಷ ಅಜಿತ್ ಪ್ರಸಾದ್ ಜೈನ್, ಯೋಗ ಗುರು ವೈ ಪ್ರೇಮ್ ಕುಮಾರ್, ಸಿಡಿಸಿ ಸದಸ್ಯರುಗಳಾದ ಮಹೇಶ್ ಕೆ.ಸಿ, ಸುಜಿತ್, ಶಾಹುಲ್ ಹಮೀದ್, ನೌಶದ್ ಆಲಿ ಹೆಮ್ಮಕ್ಕಿ, ಬಾಲಕೃಷ್ಣ, ಪ್ರಭಾಮಣಿ, ಪಣೀಶ್, ಸಾತ್ವಿಕ್, ಉಪನ್ಯಾಸಕರಾದ ಡಾ.ಆದಿತ್ಯ ಆಡಿಗ, ಸುಧೀರ್ ಜೈನ್, ವಿಶು ಕುಮಾರ್, ಸೋಮಶೇಖರ, ಸಂತೋಷ್, ನಿವೇದಿತಾ ಇತರರು ಇದ್ದರು.