ಕಳಸ ಲೈವ್ ವರದಿ
ಕಳಸ ಕಲಶೇಶ್ವರಲ್ಲಿ ಪ್ರತೀ ವರ್ಷ ಮಳೆಗಾಲದ ಪೂರ್ವದಲ್ಲಿ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಿ ರಾಜ್ಯದ ರೈತರು ಸಮೃಧ್ದಿಯಾಗಲಿ ಎಂದು ಪ್ರಾರ್ಥಿಸಿ ಪರ್ಜನ್ಯ ಜಪ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು
ಆದರೆ ಈ ಬಾರಿ ಮಳೆ ಹೆಚ್ಚಾಗಿದೆ, ಸದ್ಯಕ್ಕೆ ಮಳೆ ನಿಲ್ಲಿಸು ಎಂದು ಕಲಶೇಶ್ವರನಲ್ಲಿ ಮೊರೆ ಇಡಲಾಗಿದೆ.
ಕಳಸ ತಾಲ್ಲೂಕಿನಲ್ಲಿ 20 ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ. ಮಳೆಯ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ.ಆದ್ದರಿಂದ ಸುರಿಮಳೆಯನ್ನು ನಿಲ್ಲಿಸಿ ಹದವಾದ ಮಳೆ ಕರುಣಿಸುವಂತೆ ಇಲ್ಲಿನ ಊರ ದೇವರಾದ ಕಲಶೇಶ್ವರನಲ್ಲಿ ಭಕ್ತರು ಶುಕ್ರವಾರ ಮೊರೆ ಇಟ್ಟಿದ್ದಾರೆ.
ಅತಿಯಾದ ಮಳೆಯಿಂದ ಜನ, ಜಾನುವಾರುಗಳ ಜೊತೆ ಪ್ರಾಣಿಪಕ್ಷಿಗಳಿಗೂ ಬಾಧೆ ಆಗಿದೆ. ದರೆ ಕುಸಿತ, ಮರ ಬಿದ್ದು ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ.ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಆದ್ದರಿಂದ ಅತಿವೃಷ್ಟಿ ಆಗದಂತೆ ಹದವಾದ ಮಳೆ ನೀಡು ಎಂದು ಕಲಶೇಶ್ವರ ಸ್ವಾಮಿಗೆ ಅಗ್ನಿ ಸೂಕ್ತ ಮಂತ್ರ ಪಠಿಸಲಾಯಿತು.
ಸಕಲ ಜೀವರಾಶಿಗೂ ಅನುಕೂಲವಾಗುವಂತೆ ಮಳೆ, ಬೆಳೆ ಕರುಣಿಸಬೇಕು ಎಂದು ಕಲಶೇಶ್ವರನಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯರಾದ ರಂಗನಾಥ್, ಕಾರ್ತಿಕ್ ಶಾಸ್ತ್ರಿ, ಸತೀಶ್, ಶ್ರೀಧರ್, ಕಾರ್ಯನಿರ್ವಹಣಾಧಿಕಾರಿ ಪ್ರೇಮಲತಾ ಮತ್ತು ಭಕ್ತಾಧಿಗಳು ಇದ್ದರು.