ಕಳಸ ಲೈವ್ ವರದಿ
ಕಳಸ ಪಟ್ಟಣದಲ್ಲಿ ಸಿಕ್ಕಿದ ೧೫ ಗ್ರಾಂ ತೂಕದ ಮಾಂಗಲ್ಯ ಸರವನ್ನು ಮರಳಿ ನೀಡಿ ಹೃದಯ ಶ್ರೀಮಂತಿಗೆ ತೋರಿಸಿದ ಶ್ರೀಮತಿ ಜಯಲಕ್ಷ್ಮಿ ಇವರಿಗೆ ಕಳಸ ಲೈವ್ ಪರವಾಗಿ ಅಭಿನಂದನೆಗಳು.
ಕಳಸ ಪ್ರೊಷೆಷನಲ್ ಕೊರಿಯಾರ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಮತಿ ಜಯಲಕ್ಷ್ಮಿ ಅವರಿಗೆ ಕಳಸ ಪಟ್ಟಣದಲ್ಲಿ ೧೫ ಗ್ರಾಂ ತೂಕದ ಮಾಂಗಲ್ಯ ಸಿಕ್ಕಿತ್ತು. ಅದನ್ನು ಜಯಕುಮಾರ್ ಭಟ್ ಅವರಿಗೆ ನೀಡಿ ವಾರಿಸುದಾರರನ್ನು ಹುಡುಕಿ ತಲುಪಿಸಿ ಎಂದು ಮರಳಿ ನೀಡಿದ್ದರು.
ಜಯಕುಮಾರ್ ಭಟ್ ಅದನ್ನು ಕಳಸ ಪೊಲೀಸ್ ಠಾಣೆಗೆ ನೀಡಿದ್ದರು. ಮಾಂಗಲ್ಯ ಸರ ಸಿಕ್ಕಿರುವ ವಿಚಾರ ಸಾಮಾಜಿಕ ಜಾಲದಲ್ಲಿ ವೈರಲ್ ಮಾಡಲಾಗಿತ್ತು. ಈ ಮಾಂಗಲ್ಯ ಸರವು ಗಣೇಶ್ ಕುಕ್ಕೋಡ್ ಅವರ ಪತ್ನಿಯದಾಗಿತ್ತು. ಕಳೆದು ಹೋದ ಮಾಂಗಲ್ಯ ಸರವನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ವ್ಯಾಟ್ಸಾಪ್ ಹರಿದಾಡುತ್ತಿದ್ದ ಮೆಸೆಜ್ ನೋಡಿ ಕಳಸ ಪೊಲೀಸ್ ಠಾಣೆಗೆ ತೆರಳಿ ಪಿಎಸೈ ನಿತ್ಯಾನಂದ ಅವರಿಂದ ಮರಳಿ ಪಡೆದುಕೊಂಡಿದ್ದಾರೆ.
ಸಿಕ್ಕಿದ ಮಾಂಗಲ್ಯ ಸರವನ್ನು ಮರಳಿ ನೀಡಿದ ಜಯಲಕ್ಷ್ಮಿ ಅವರ ಪ್ರಾಮಾಣಿಕತೆಗೆ ಕಳಸದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.ಹಾಗೇಯೆ ಜಯಕುಮಾರ್ ಭಟ್, ಕಳಸ ಠಾಣಾಧಿಕಾರಿ ನಿತ್ಯಾನಂದ ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.