ಕಳಸ ಲೈವ್ ವರದಿ
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗುವ ಕಳಸ-ಹೊರನಾಡು ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬೋಳೆ ಸೇತುವೆ ಮುಳುಗಡೆ ಆಗಿದ್ಯಾ ಟೆನ್ಷನ್ ಮಾಡುವ ಅಗತ್ಯವೇ ಇಲ್ಲ. ಬದಲಿ ರಸ್ತೆಯನ್ನು ಉಪಯೋಗಿಸಿಕೊಂಡು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ತಲುಪಿ ದೇವರ ದರ್ಶನ ಪಡೆದುಕೊಂಡು ಬರಬಹುದು.
ಮಳೆಗಾಲದಲ್ಲಿ ಕಳಸ-ಹೊರನಾಡು ಮಧ್ಯೆ ಸಿಗುವ ಹೆಬ್ಬೋಳೆ ಮುಳುಗು ಸೇತುವೆ ಪ್ರತೀ ವರ್ಷ ಮುಳುಗಡೆ ಆಗೋದು ಸರ್ವೆ ಸಾಮಾನ್ಯ. ಹಾಗೆಂದ್ರ ಮಾತ್ರಕ್ಕೆ ಹೊರನಾಡು ದೇವಸ್ಥಾನಕ್ಕೆ ಹೋಗಲು ಬೇರೆ ಮಾರ್ಗ ಇಲ್ಲ ಅಂತ ಏನಿಲ್ಲ. ಕಳಸದಿಂದ ಬಾಳೆಹೊನ್ನೂರು ಹೋಗುವ ಮಾರ್ಗ ಕಳಸದಿಂದ 4 ಕಿಮೀ ಕ್ರಮಿಸಿದರೆ ಹಳುವಳ್ಳಿ ಸಿಗುತ್ತದೆ ಅಲ್ಲಿ ಎಡಕ್ಕೆ ತಿರುಗಿ ಪ್ರಯಾಣ ಬೆಳೆಸಿದರೆ 8 ಕಿ.ಮೀ ದೂರಕ್ಕೆ ಹೊರನಾಡು ದೇವಸ್ಥಾನ ತಲುಪಬಹುದು.
ಈಗಾಗಾಲೆ ಭದ್ರಾ ನದಿಯ ಹೆಬ್ಬೋಳೆ ಬಳಿ ಬೃಹತ್ ಸೇತುವೆ ನಿರ್ಮಾಣಗೊಳ್ಳುತ್ತಿದ್ದು, ಬರುವ ವರ್ಷದಿಂದ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತ ಗೊಂಡಿತು ಎನ್ನುವ ಸುದ್ದಿಗಳಿಗೆ ಬ್ರೇಕ್ ಬೀಳಲಿದೆ.
Related Stories
September 6, 2024