ಕಳಸ ಲೈವ್ ವರದಿ
ಕಳಸದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಎಲ್ ಐಸಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಸಹಾಯಕ ಬ್ರಾಂಚ್ ಮ್ಯಾನೆಜರ್ ಆಗಿ ಬಡ್ತಿ ಹೊಂದಿ ಸಾಗರಕ್ಕೆ ವರ್ಗಾವಣೆಗೊಂಡ ಜಗದೀಶ್ ನಾಯ್ಕ್ ಅವರನ್ನು ಕಳಸ ಜೆಸಿಐ ಸಂಸ್ಥೆಯು ಆತ್ಮೀಯವಾಗಿ ಬೀಳ್ಕೊಟ್ಟಿತು.
ಜಗದೀಶ್ ನಾಯ್ಕ್ 2012 ರಲ್ಲಿ ಕಳಸ ಜೆಸಿಐ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕಳೆದ 12 ವರ್ಷಗಳಿಂದಲೂ ಕಳಸ ಜೆಸಿಐನ್ನು ಮುನ್ನಡೆಸಲು ಸಾಕಷ್ಟು ಶ್ರಮಿಸಿದ್ದರು ಎಂದು ಕಳಸ ಜೆಸಿಐ ಅಧ್ಯಕ್ಷ ಶ್ರೀಕಾಂತ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ನಾಯ್ಕ್, ಕಳಸ ನನಗೆ ಎಲ್ಲವನ್ನೂ ಕೊಟ್ಟಿದೆ.ಇಲ್ಲಿಯ ಜನರ ನಿಷ್ಕಲ್ಮಶ ಪ್ರೀತಿ ಹಾಗೂ ಎಲ್ಲರ ಆಶೀರ್ವಾದದಿಂದ ನನಗೆ ಬಡ್ತಿಹೊಂದಿದೆ. ಈ ಊರಿಗೆ ನಾನು ಸದಾ ಚಿರಋಣಿಯಾಗಿರ್ತಿನಿ ಎಂದು ಹೇಳಿದರು.
ಪೂರ್ವಧ್ಯಕ್ಷರುಗಳಾದ ಸುರೇಂದ್ರ, ಅಶೋಕ್, ಕೆ.ಸಿ ಮಹೇಶ್, ಪ್ರಶಾಂತ್, ನಿಖಟಪೂರ್ವ ಅಧ್ಯಕ್ಷ ಚರಣ್, ಕಾರ್ಯದರ್ಶಿ ಸುಧಾಕರ್, ಸದಸ್ಯರುಗಳಾದ ಶಿವಪ್ರಸಾದ್, ವಿಜಯ್, ಜಯಪ್ರಕಾಶ್, ಸತೀಶ್, ಮುರುಳಿ, ಪ್ರಭು, ನಜೀರ್ ಇತರರು ಇದ್ದರು.
Related Stories
September 6, 2024