ಕಳಸ ಲೈವ್ ವರದಿ
ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಹಾಗೂ ಹೊಸದಾಗಿ ಟವರ್ ಹಾಕಲು ಇರುವ ಅಡ್ಡಿ ಗಳ ಕುರಿತು ನಾಳೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ನೂತನ ಸಂಸದರ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾಗಿದೆ.
ಕಳಸ ತಾಲ್ಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಇಲ್ಲ, ಟವರ್ ಇದ್ದರೂ ವಿದ್ಯುತ್ ಕಡಿತಗೊಂಡಾಗ ನೆಟ್ವರ್ಕ್ ಕಡಿತಗೊಳ್ಳುತ್ತದೆ.ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು.
ಸಂಸದರು ಪ್ರಥಮ ಬಾರಿಗೆ ಕಳಸಕ್ಕೆ ಬಂದಾಗ ನೀಡಿದ ಮಾತಿನಂತೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಅಧಿಕಾರಿಗಳ ಸಭೆಯನ್ನು ನಾಳೆ ಕರೆಯಲಾಗಿದ್ದು, ಈ ಬಗ್ಗೆ ತುರ್ತಾಗಿ ಕಳಸ ತಾಲೂಕಿನಲ್ಲಿ ಯಾವ ಯಾವ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ಯೋ ಅದರ ಬಗ್ಗೆ ಸಂಸದರ ಹಾಗೂ ಶಾಸಕರ ಗಮನ ಸೆಳೆಯವ ಅಗತ್ಯ ಇದೆ.
Related Stories
September 6, 2024