ಕಳಸ ಲೈವ್ ವರದಿ
ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶುದ್ಧಗಂಗಾ ಕುಡಿಯುವ ನೀರಿನ ಘಟಕ ದುಸ್ಥಿತಿಯಲ್ಲಿರುವ ಬಗ್ಗೆ ಕಳಸ ಲೈವ್ ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದು ಕೊರತೆ ವಿಭಾಗ ಜನಸ್ಪಂದನಕ್ಕೆ ದೂರು ಸಲ್ಲಿಸಿತ್ತು.
ದೂರು ಸಲ್ಲಿಸಿದ ಮೂರು ದಿನಗಳಲ್ಲಿಯೇ ಸಿಎಂ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ನೀರಿನ ಘಟಕ ದುರಸ್ಥಿ ಇಂದು ಕಾಮಗಾರಿ ನಡೆಸಲಾಗಿದೆ.
ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಇಂಜಿನಿಯರ್ ರವರು ಕಳಸ ಲೈವ್ ಗೆ ಕರೆ ಮಾಡಿ, ಸಮಸ್ಯೆಯ ವಿವರ ಪಡೆದು, ತುರ್ತು ದುರಸ್ಥಿ ಕಾರ್ಯ ಮಾಡಿಸಿರುತ್ತಾರೆ.
ಗ್ರಾಮ ಪಂಚಾಯಿತಿಯಿಂದ ಕೂದಲೆಳೆ ದೂರದಲ್ಲಿರುವ ನೀರಿನ ಘಟಕ ಕಾರ್ಯ ಸ್ಥಗಿತ ಮಾಡಿ, ತಿಂಗಳುಗಳೇ ಕಳೆದಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿತ್ತು.
ತುರ್ತು ಸ್ಪಂದನೆ ನೀಡಿದ ಸಿಎಂ ಕಚೇರಿ ಜನ ಸ್ಪಂದನಾ ವಿಭಾಗದ ಕಾರ್ಯ ಶ್ಲಾಘನೀಯವಾಗಿದೆ.
Related Stories
September 6, 2024