ಕಳಸ ಲೈವ್ ವರದಿ
ಯಾರು ತಮಗೋಸ್ಕರ ಅಲ್ಲದೆ ಈ ಸಮಾಜಕೋಸ್ಕರ ಬದುಕುತ್ತಾರೋ ಅವರು ಶಾಶ್ವತವಾಗಿ ಎಲ್ಲರ ಮನಸ್ಸಲ್ಲಿ ನೆಲೆಯೂರುತ್ತಾರೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ಹೇಳಿದರು.
ತಾಲೂಕಿನ ಬಾಳೆಹೊಳೆಯಲ್ಲಿ ಸೋಮವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಯ ಜ್ಞಾನದ ಗಳಿಕೆ ಹೇಗಿರಬೇಕು ಎಂದರೆ ಅವನು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಯಶಸ್ವಿಯಾಗುವ ಶಕ್ತಿ ಸಾಮಥ್ರ್ಯವನ್ನು ಆ ವಿದ್ಯಾರ್ಥಿ ಪಡೆದಿರಬೇಕು.ಆ ಜ್ಞಾನವನ್ನು ತಿಳಿಯಬೇಕಾದರೆ ಇಂತಹ ಶಿಬಿರಗಳು ಅತ್ಯವಶ್ಯಕವಾಗುತ್ತದೆ.
ವಿದ್ಯಾರ್ಥಿಗೆ ಬರೀ ವಿದ್ಯೆ ಇದ್ರೆ ಸಾಕಾಗುವುದಿಲ್ಲ ಸಾಮಾಜದಲ್ಲಿ ಬದುಕುವಂತ ಸಾಮಾಣ್ಯ ಜ್ಞಾನ ಇರಬೇಕು ಅವಾಗ ಮಾತ್ರ ಆತ ಮನುಷ್ಯನಾಗಿ ಬದುಕಲು ಸಾಧ್ಯ, ಮನುಷ್ಯನಾಗಿ ಈ ಸಾಮಾಜದಲ್ಲಿ ಪ್ರೀತಿಸಿ ಬದುಕೋದಕ್ಕೆ ಸಾಧ್ಯ ಅದಕ್ಕಾಗಿ ಇಂತಹ ಶಿಬಿರಗಳು ಬಹಳ ಮುಖ್ಯ. ನೀವು ಸಮಗ್ರವಾಗಿ ನಿಮ್ಮನ್ನು ಬೆಳೆಸಿಕೊಂಡು ಹೋಗುವುದರ ಜೊತೆಗೆ ದೇಶ ಪ್ರೇಮವನ್ನು, ಜನರೊಂದಿಗೆ ಬೆರೆಯುವ ಉದ್ದೇಶದಿಂದ ಈ ಶಿಬಿರವನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಮಾತನಾಡಿ ನಾವು ಸಂಪಾದಿಸುವ ಹಣ ಯಾವತ್ತೂ ಶಾಶ್ವತವಾಗಿರುವುದಿಲ್ಲ ಆದರೆ ನಮ್ಮಲ್ಲಿರುವ ಜ್ಞಾನ ಸಂಪಾದನೆ ಅದು ಕೊನೆಯವರೆಗೂ ಇರುತ್ತದೆ.ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಸಮಾನತೆಯ ಜೀವನವನ್ನು ಕಲಿಸಿಕೊಡುತ್ತದೆ.ಇಂತಹ ಶಿಬಿರಗಳಿಗೆ ಊರಿನ ಜನರು ಕೂಡ ಹೆಚ್ಚಿನ ಸಹಕಾರ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗಣೇಶ್ ಭಟ್, ಕಳಸ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎ.ರಂಗನಾಥ್, ರಾ.ಸೇ.ಯೋ ಶಿಬಿರಾಧಿಕಾರಿಗಳಾದ ಸಂತೋಷ್ ಕೆ.ಬಿ, ಸುದೀರ್ ಜೈನ್ ಎಂ.ಎಸ್, ಯೋಗ ಗುರು ವೈ. ಪ್ರೇಮ್ ಕುಮಾರ್, ವಿಷು ಕುಮಾರ್, ಸೋಮಶೇಖರ ಸಿ.ಎನ್, ಅಕ್ಷತಾ.ಡಿ, ಇತರರು ಇದ್ದರು.
Related Stories
September 6, 2024