ಕಳಸ ಲೈವ್ ವರದಿ
ಕಳಸ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಪ್ರಗತಿ.ಜಿ.ಶೇಟ್ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರು ಉತ್ಸವ, ಕಳಸ ಉತ್ಸವ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಆಕರ್ಷಕವಾಗಿ ಮಾದರಿ ಪ್ರದರ್ಶನ ಮಾಡುತ್ತಿದ್ದ ಇವರು ಶಿಕ್ಷಕ ಸಂದೇಶ ರವರ ಮಾರ್ಗದರ್ಶನದಲ್ಲಿ ತಯಾರಿಸಿದ ಮಲ್ಟಿ ಪರ್ಪಸ್ ಅಗ್ರಿ ಶೆಡ್ ಮಾದರಿ ಈಗ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಜ್ಯ ಹಂತಕ್ಕೆ ಆಯ್ಕೆಗೊಂಡಿದೆ ಎಂದು ಉಪ ಪ್ರಾಂಶುಪಾಲ ಜಿ. ಶಿವಕುಮಾರ ಸ್ವಾಮಿ ತಿಳಿಸಿದರು.
ಪ್ರಗತಿ.ಜಿ.ಶೇಟ್ ಕಳಸ ಪಟ್ಟಣದ ಶ್ರೀಮತಿ ಪಾರ್ವತಿ ಮತ್ತು ಶ್ರೀ ಗುರು ಶೇಟ್ ರವರ ಪುತ್ರಿಯಾಗಿದ್ದಾರೆ. ಪ್ರಗತಿ ಪ್ರಸ್ತುತ ಎಸ್ಡಿಎಂ ಕಾಲೇಜಿನಲ್ಲಿ ಮೊದಲನೆ ವರ್ಷದ ಪಿಯುಸಿ ಕಂಪ್ಯೂಟರ ಸೈನ್ಸ್ ಓದುತ್ತಿದ್ದಾರೆ.