ಕಳಸ ಲೈವ್ ವರದಿ
ರೋಟರಿ ಕ್ಲಬ್ ಕಳಸ ಹಾಗೂ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರ, ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 10.06.2024 ರಿಂದ 19.06.2024 ವರೆಗೆ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರವನ್ನು ಏರ್ಪಡಿಸಲಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಡಿ.ನಾಗರಾಜ್ ಹಾಗೂ ಯು.ಪಿ.ಚಂದ್ರಕಲಾ ಇವರು ಶಿಬಿರವನ್ನು ನಡೆಸಿಕೊಡಲಿದ್ದಾರೆ.
ರೋಟರಿ ಶತಾಬ್ಬಿ ಭವನ, ಕಳಸ ಇಲ್ಲಿ ಶಿಬಿರ ನಡೆಯಲಿದ್ದು, ಈ ಶಿಬಿರದಲ್ಲಿ ಔಷಧಿಗಳಿಲ್ಲದೆ ಎಲ್ಲಾ ಖಾಯಿಲೆಗಳನ್ನು ಹಾಗೂ ದೇಹದ ಬೊಜ್ಜನ್ನು ಕರಗಿಸುವ ಅನೇಕ ಆಸನಗಳನ್ನು ಹೇಳಿಕೊಡಲಾಗುವುದು. 8 ವರ್ಷದಿಂದ 80 ವರ್ಷದ ವ್ಯಕ್ತಿಗಳಿಗೆ ಸೇರಲು ಅವಕಾಶವಿರುತ್ತದೆ. ಸಮಯ ಬೆಳಗ್ಗೆ 6:15 ರಿಂದ 7:30 ಅಥವಾ ಸಂಜೆ 5:15 ರಿಂದ 6:30 ವರೆಗೆ ಶಿಬಿರ ನಡೆಯಲಿದೆ.
ಈ ಶಿಬಿರದ ಉದ್ಘಾಟನೆಯನ್ನು ರೋಟರಿ ಕ್ಲಬ್, ಕಳಸದ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಜಿ. ಜೋಷಿಯವರು ನೆರವೇರಿಸುತ್ತಾರೆ ಮತ್ತು ಯೋಗದ ಬಗ್ಗೆ ಪರಿಚಯ ಕಾರ್ಯಕ್ರಮವನ್ನು ಶ್ರೀಯುತ ಡಿ.ನಾಗರಾಜ್ ಅವರು ಮಾಡುತ್ತಾರೆ. ಉದ್ಘಾಟನೆಯನ್ನು ದಿನಾಂಕ:-09-06-2024ರ ಭಾನುವಾರ ಸಂಜೆ 05-00 ಗಂಟೆಗೆ ಏರ್ಪಡಿಸಲಾಗಿದೆ.
ಹೆಚ್ಚಿನ ವಿವರಗಳಿಗೆ :- ಅಧ್ಯಕ್ಷರಾದ ರೋ. ಸಾವಿತ್ರಿ ಜಿ ಜೋಷಿ, ರೋ. ಫಣೀಶ್ ಡಿ.ಕೆ., ಹಾಗೂ ರೋ. ಗಿ.ಬಿ.ಗಿರಿಜಾಶಂಕರ್ ಜೋಷಿಯವರನ್ನು ಸಂಪರ್ಕಿಸಬಹುದು.
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ :- 9448590193, 9449986209