ಕಳಸ ಲೈವ್ ವರದಿ
ಕಳೆದ ಒಂಬತ್ತು ದಿನಗಳ ಹಿಂದೆ ಮೃತ ಪಟ್ಟಿದ್ದ ಅನಾಥ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಕಳಸ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ನೆರವೇರಿಸಲಾಯಿತು.
ಕಳಸ ಕಲಶೇಶ್ವರ ದೇವಸ್ಥಾನ ರಂಗಮಂದಿರ ಬಳಿ ಮೆಟ್ಟಿಲಲ್ಲಿ ಅಪರಿಚಿತ ವ್ಯಕ್ತಿ ಮೇ 10ರಂದು ಆಕಸ್ಮಿಕವಾಗಿ ಕುಸಿದು ಬಿದ್ದು ಮೃತ ಪಟ್ಟಿದ್ದರು.
ಇವರ ಕುಟುಂಬಸ್ಥರು ಅಥವ ವಾರಿಸುದಾರರು ಯಾರಾದರೂ ಇದ್ದರೆ ಇವರ ಬರುವಿಕೆಗಾಗಿ ಶನಿವಾರದವರೆಗೆ ಮೃತದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು.
ಶನಿವಾರದವರೆಗೆ ಯಾರೂ ಬರದೆ ಇರುವ ಹಿನ್ನಲೆಯಲ್ಲಿ ಶನಿವಾರ ಸಂಜೆ ಅನಾಥ ಶವದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯ ಸಂಸ್ಕಾರವನ್ನು ಕಳಸ ಗ್ರಾಮ ಪಂಚಾಯಿತಿ ವತಿಯಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕಳಸ ಪಿಎಸೈ ಬಾಬು, ಸಿಬ್ಬಂದಿ ಸಿದ್ದಪ್ಪ ಕರಂಡಿ, ಪಂಚಾಯಿತಿ ಸಿಬ್ಬಂದಿ ಸುನೀಲ್ ಇದ್ದರು.
Related Stories
September 6, 2024