ಕಳಸ ಲೈವ್ ವರದಿ
ಕಳಸದಿಂದ ಉಡುಪಿ ಕಡೆ ಹೋಗುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಘಟನೆ ಭಾನುವಾರ ನಡೆದಿದೆ.
ಕಳಸ-ಕುದುರೆಮುಖ ಮುಖ್ಯ ರಸ್ತೆಯ ಸರ್ವಿಸ್ ಸ್ಟೇಷನ್ ಬಳಿ ಈ ಘಟನೆ ನಡೆದಿದ್ದು, ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ಜೆಸಿಬಿ ಬಳಸಿ ಸ್ಥಳಿಯರ ನೆರವಿನಿಂದ ಕಾರನ್ನು ಎಳೆದು ತರಲಾಯಿತು..