ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನದ ಹುಂಡಿ ಹೊಡೆದು ಕಳ್ಳತನ ಮಾಡಲು ಯತ್ನಿಸಿದ ಕಳ್ಳ ಕಳಸ ಪೊಲೀಸರ ಅತಿಥಿಯಾದ ಘಟನೆ ಭಾನುವಾರದ ತಡರಾತ್ರಿ ನಡೆದಿದೆ.
ಆರೋಪಿ ಶಿಕಾರಿಪುರದ ಬೇಗೂರು ಗ್ರಾಮದವಡ್ಡಿಗೇರಿಯ ಚಂದ್ರಶೇಖರ ಎಂದು ಗುರುತಿಸಲಾಗಿದೆ.
ಆರೋಪಿಯು ಭಾನುವಾರ ತಡರಾತ್ರಿ ದೇವಸ್ಥಾನದ ಒಳಭಾಗದಲ್ಲಿರುವ ಹಣ್ಣು ಕಾಯಿ ಅಂಗಡಿಗೆ ನುಗ್ಗಿ ಅಲ್ಲಿ ಸರ, ಕೀಪಂಚ್ ಇನ್ನಿತರೆ ಸಾಮಾಗ್ರಿಗಳು ಸೇರಿದಂತೆ ಚಿಲ್ಲರೆ ಹಣವನ್ನು ಕದ್ದು ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿ ನಂತರ ಕಳಸ ಕಲಶೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಹೊಡೆದು ಹಣ ಕಳ್ಳತನ ಮಾಡಲು ಯತ್ನಿಸಿದ್ದಾನೆ.ಈ ವೇಳೆ ದೇವಸ್ಥಾನದ ಅಲ್ಲಿಯ ವಾಚ್ಮ್ಯಾನ್ ಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ಕೂಡಲೇ ಆತನನ್ನು ಕಳಸ ಪೊಲೀಸರಿಗೆ ಒಪ್ಪಿಸಲಾಗಿದೆ.ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.