ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕಛೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಹಸಿಲ್ದಾರ್ ಬಸವರಾಜ್ ಮೇಲೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳಕೋಡು ಸುಕುಮಾರ್ ಎಂಬುವವರು ನೀಡಿದ ದೂರಿನ ಅನ್ವಯ 2024ರ ಮಾರ್ಚ್ 7ರಂದು ಸರ್ವೆ ನಂ 80. ಹೊಸ ಸಂಖ್ಯೆ 111 ರಲ್ಲಿ ಜಮೀನಿನ ತೆರಿಗೆ ಮತ್ತು ಇಂಡೀಕರಣ ಪಾವತಿಸಲು ತೆರಳಿದ ಸಂದರ್ಭದಲ್ಲಿ 35,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ಕೊಡಲು ಒಪ್ಪದಿದ್ದಾಗ ತಹಸೀಲ್ದಾರ್ ಬಸವರಾಜ್ ಏಕವಚನ ಮತ್ತು ಅಸಭ್ಯ ಪದಗಳನ್ನು ಬಳಸಿ ಕುತ್ತಿಗೆ ಹಿಡಿದು ಹೊರ ತಲ್ಲುವುದಾಗಿ ಹೇಳಿದಲ್ಲದೆ.ನಿಮ್ಮ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳಿದ್ದು, ಭೂಕಂದಾಯ ದಾಖಲಾತಿಗಳನ್ನು ಹಾಳು ಮಾಡುವುದಾಗಿ ತಿಳಿಸಿದ್ದಾರೆ. ತಹಸಿಲ್ದಾರ್ ಈ ನಡೆಯಿಂದ ತನಗೆ ಜೀವ ಭಯವಿದ್ದು, ಮತ್ತು ಬೆದರಿಕೆಯಿಂದ ನಾನು ಮಾನಸೀಕವಾಗಿ ಕುಗ್ಗಿ ಹೋಗಿರುತ್ತೇನೆ.ಆದ್ದರಿಂದ ತಹಸಿಲ್ದಾರ್ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ.
ದೂರಿನ ಅನ್ವಯ ತಹಸಿಲ್ದಾರ್ ಬಸವರಾಜ್ ಮೇಲೆಕಲಂ 166,426, 504, 506 ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.
ಈ ಹಿಂದೆ ಕಳಸ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಸೀಲ್ದರ್ ಬಸವರಾಜ್ ಲಂಚಕ್ಕೆ ಬೇಡಿಕೆ ಇಡುತ್ತಾರೆ ಮತ್ತು ಕಛೇರಿಯಲ್ಲಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.ಕಛೇರಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ.ಸಾರ್ವಜನಿಕರಿಗೆ ಇವರಿಂದ ಸಾಕಷ್ಟು ತೊಂದರೆ ಆಗುತ್ತಿದೆ ಇವರನ್ನು ಕಳಸ ತಾಲ್ಲೂಕು ಕಛೇರಿಯಿಂದ ವರ್ಗಾವಣೆ ಮಾಡಬೇಕು ಎಂದು ತಾ.ಪಂ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಆರೋಪಿಸಿದ್ದರು.
ನಂತರದಲ್ಲಿ ಚುನಾವಣೆ ಸಂದರ್ಭದಲ್ಲಿ ಇವರನ್ನು ಕಂದಾಯ ಇಲಾಖೆ ಕೇಂದ್ರ ಕಛೇರಿಗೆ ವರ್ಗಾವಣೆ ಮಾಡಲಾಗಿತ್ತು.