ಕಳಸ ಲೈವ್ ವರದಿ
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ ತಾಲೂಕಿನ ಕರಗುಂದದಲ್ಲಿ ನಡೆದಿದೆ.
ಹೊರನಾಡು ಮುಂಡುಗದ ಮನೆ ಸುನೀಲ್ ಮತ್ತು ಮೂಲತಃ ಹಾಸನದ ಉಮೇಶ್ ಮೃತಪಟ್ಟ ವ್ಯಕ್ತಿಗಳು.
ಇಬ್ಬರೂ ಹೊರನಾಡಿನ ಲಾಡ್ಜೊಂದರಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಬೆಳಿಗ್ಗೆ ಹೊರನಾಡಿನಿಂದ ಶಿವಮೊಗ್ಗಕ್ಕೆ ಬೈಕ್ ಸರ್ವಿಸ್ ಮಾಡಲೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಎನ್.ಆರ್.ಪುರ ಕರಗುಂದದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದಾರೆ ಎನ್ನಲಾಗಿದೆ.ಡಿಕ್ಕಿಯಾದ ರಬಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Related Stories
September 6, 2024