ಕಳಸ ಲೈವ್ ವರದಿ
ಚಿತ್ರನಟಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ಬುಧವಾರ ಕಳಸದಲ್ಲಿ ಮ್ಯೂಸಿಕ್ ಪ್ರೊಡ್ಯೂಸರ್ ಮೈಸೂರಿನ ಅರುಣ್ ಕುಮಾರ್ ಜೊತೆ ಸಪ್ತಪದಿ ತುಳಿದರು.
ಮೂಲತಃ ಕಳಸದಲ್ಲಿಯೇ ಹುಟ್ಟಿ ಬೆಳೆದ ಮಾನ್ವಿತ ಕಾಮತ್ ದುನಿಯಾ ಸೂರಿ ನಿರ್ದೇಶನದ ʻಕೆಂಡಸಂಪಿಗೆʼ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಬಳಿಕ ಶಿವಣ್ಣನ ʻಟಗರುʼ ಸಿನಿಮಾದಲ್ಲಿ ಬಣ್ಣ ಹಚ್ಚಿ ʻಟಗರು ಪುಟ್ಟಿʼಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದರು. ಕನಕ, ರಿಲ್ಯಾಕ್ಸ್ ಸತ್ಯ, ಶಿವ143, ತಾರಕಾಸುರ, ಇಂಡಿಯಾ ವರ್ಸ್ಸ್ ಇಂಗ್ಲೆಂಡ್, ಅಪ್ಪ ಐ ಲವ್ ಯು, ಚೌಕ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು, ಮರಾಠಿಯಲ್ಲಿ ನಿರ್ಮಾಣವಾಗಿರುವ ಹ್ಯಾಪಿಲೀ ಮ್ಯಾರಿಡ್, ಬ್ಯಾಡ್, ರಾಜಸ್ಥಾನ್ ಡೈರಿಸ್ ಚಿತ್ರಗಳು ಬಿಡುಗಡೆ ಆಗಬೇಕಾಗಿದೆ.
ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಮಾನ್ವಿತ, ಕಳೆದ ವರ್ಷ ತಾಯಿಯನ್ನು ಕಳೆದುಕೊಂಡಿದ್ದರು.
ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ (ಜಿಎಸ್ಬಿ ಸಂಪ್ರದಾಯದಂತೆ) ಮದುವೆಯಾಗಿದ್ದಾರೆ.ಇದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ, ಏಪ್ರಿಲ್ 30 ಅರಿಶಿನ ಶಾಸ್ತ್ರ ಜರುಗಿತು.