ಕಳಸ ಲೈವ್ ವರದಿ
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮಂಗಳವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬೇಟಿ ನೀಡಿ ಮತ ಯಾಚನೆ ನಡೆಸಿದರು.
ಬೆಳಿಗ್ಗೆ 9 ಗಂಟೆಗೆ ಹಿರೇಬೈಲು ಗ್ರಾಮಕ್ಕೆ ಬೇಟಿ ನೀಡಿ ನಂತರ ಬಾಳೆಹೊಳೆ, ಹೊರನಾಡು, ಸಂಸೆ ಗ್ರಾಮಗಳಿಗೆ ಬೇಟಿ ನೀಡಿ ಹೆಗ್ಡೆ ಪರ ಮತಯಾಚನೆ ಮಾಡಿದರು.
ಇವರಿಗೆ ಮಾಜಿ ಶಾಸಕರುಗಳಾದ ಎಂ.ಪಿ ಕುಮಾರಸ್ವಾಮಿ, ಬಿ.ಬಿ.ನಿಂಗಯ್ಯ ಸಾಥ್ ನೀಡಿದರು.
ನಂತರ ಸಂಸೆ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ನಡೆಯುವ ರಥೋತ್ಸವ ಕಾರ್ಯಕ್ರಮಕ್ಕೆ ಬೇಟಿ ನೀಡಿದರು.
ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಸಾರ್ವಜನಿಕರನ್ನು ಮಾತನಾಡಿಸಿ ಮಾಜಿ ಮತ್ತು ಹಾಲಿ ಶಾಸಕರು ಒಟ್ಟಿಗೆ ಕೂತು ಭೋಜನ ಸವಿದರು.
ಕಾಂಗ್ರೆಸ್ ಮುಖಂಡರಾದ ಕೆ.ಎ.ಶ್ರೇಣಿಕ್, ಕೆ.ಆರ್.ಪ್ರಭಾಕರ್, ರಾಜೇಂದ್ರ ಪ್ರಸಾದ್, ಮಹಮ್ಮದ್ ರಫೀಕ್, ವಿಶ್ವನಾಥ್ ಮರಸಣಿಗೆ, ವೀರೇಂದ್ರ ಜೈನ್, ಸುಧಾಕರ್ ಇತರರು ಇದ್ದರು.