ಕಳಸ ಲೈವ್ ವರದಿ
ಎಪ್ರಿಲ್ 26ರ ರಂದು ನಡೆಯುವ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ ಇದು ಭಾರತ ದೇಶದ ಭವಿಷ್ಯವನ್ನು ಬರೆಯುವ ಚುನಾವಣೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಲೋಕ ಸಭಾ ಚುನಾವಣೆಯ ಬಿಜೆಪಿಯ ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಹೇಳಿದರು.
ಕಳಸದಲ್ಲಿ ಸೋಮವಾರ ಸಂಜೆ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಭಾರತದ ಗಡಿಯನ್ನು ಭದ್ರಗೊಳಿಸಿ ಸೈನಿಕರಿಗೆ ಉತ್ತೇಜನ ಕೊಟ್ಟು ಈ ದೇಶದ ಜನರಿಗೆ ನೆಮ್ಮದಿಯ ಬದುಕನ್ನು ನೀಡುವಂತ ಸಾಮಥ್ರ್ಯ ಯಾರಿಗಿದೆಯೋ ಅವರನ್ನು ಪ್ರಧಾನಿ ಮಾಡುವಂತ ಚುನಾವಣೆ ಆಗಿದೆ.
ಬಾಬ ಸಾಹೇಬ್ ಅಂಬೇಡ್ಕರ್ ಬರೆದಂತಹ ಸಂವಿಧಾನಕ್ಕೆ ನರೇಂದ್ರ ಮೋದಿ ಸರ್ಕಾರ ಮತ್ತಷ್ಟು ಬಲವನ್ನು ಕೊಡುತ್ತದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ನವರು ಏನು ಗೌರವ ಕೊಟ್ರಿ. ದಿಲ್ಲಿಯಲ್ಲಿ ಕಾಂಗ್ರೆಸ್ ಮುಖಂಡರು ಮೃತರಾದಾಗ ಒಬ್ಬೊಬ್ಬ ನಾಯಕರಿಗೆ 10 ರಿಂದ 20 ಎಕ್ಕರೆ ಭೂಮಿ ನೀಡಲಾಗಿದೆ ಆದರೆ ಅಂಬೇಡ್ಕರ್ ಅವರಿಗೆ 10 ಅಡಿ ಜಾಗ ಕೊಡದೆ ಅವರ ಪಾರ್ಥಿವ ಶರೀರವನ್ನು ಮುಂಬಾಯಿಗೆ ಕಳುಹಿಸಿದ್ದು ಇದೇ ಕಾಂಗ್ರೆಸಿಗರು. ಒತ್ತುವರಿ ಮಾಡಿದ ಬಡವರ ಮನೆ ಜಮೀನನ್ನು ತೆರವು ಮಾಡಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ ಬೇರೆ ಬೇರೆ ಪಕ್ಷದಲ್ಲಿದ್ದ ಇಬ್ಬರು ಮಾಜಿ ಶಾಸಕರು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಈ ಮೂರು ಶಾಸಕರ ಕೊಡುಗೆ ಕಳಸಕ್ಕೆ ಏನಿದೆ. ಕಳಸದಲ್ಲಿ ಇಷ್ಟೋಂದು ಸೇತುವೆ, ಆಸ್ಪತ್ರೆ, ಕಾಲೇಜುಗಳು ಆಗಿವೆ ಅಂತಾದ್ರೆ ಅದು ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿ ಇದ್ದಾಗ ಆದ ಕೆಲಸಗಳು.ಕಳಸ ತಾಲ್ಲೂಕು ಕೇಂದ್ರ ಆಗಲು ಅಡ್ಡಿ ಪಡಿಸಿದ್ದು ಕೂಡ ಈ ಹಿಂದೆ ಇದ್ದ ಮಾಜಿ ಶಾಸಕರು ಆದರೆ ಜೆಡಿಎಸ್ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಕಳಸವನ್ನು ತಾಲ್ಲೂಕು ಕೇಂದ್ರ ಮಾಡಿದ್ದರು. ಆದರೆ ಆ ತಾಲ್ಲೂಕು ಕೇಂದ್ರಕ್ಕೆ ಸರಿಯಾಗಿ ಒಬ್ಬ ತಹಶೀಲ್ದಾರರನ್ನು ನೇಮಿಸಲು ಈ ಸರ್ಕರಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಪ್ರಚಾರ ಸಭೆಯ ಮೊದಲು ಕೋಟ ಶ್ರೀನಿವಾಸ ಪೂಜಾರಿ ಕಳಸ ಕಲಶೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ನಂತರ ನೂರರೂ ಕಾರ್ಯಕರ್ತರ ಜೊತೆಗೂಡಿ ಕಳಸ ಮುಖ್ಯ ರಸ್ತೆಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಕಾರ್ಯಕ್ರಮದ ನಂತರ ಸಂಸೆ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗಭೂಷಣ್, ಎಂ.ಕೆ.ಪ್ರಾಣೇಶ್, ಎಂ.ಎ ಶೇಷಗಿರಿ, ಗಜೇಂದ್ರ, ಕೆ.ಸಿ ರತನ್, ರಂಗನಾಥ್, ಕಾರ್ತಿಕ್ ಶಾಸ್ತ್ರೀ, ಗಿರೀಶ್ ಹೆಮ್ಮಕ್ಕಿ, ಸುಜಯ ಸದಾನಂದ, ಬಿ.ಕೆ.ಮಹೇಶ್, ಉಷಾ ವಿಶ್ವನಾಥ, ಜೆಡಿಎಸ್ ಮುಖಂಡರಾ ರಂಜನ್ ಅಜಿತ್, ಸಂತೋಷ್ ಹಿನಾರಿ, ಜ್ವಾಲನಯ್ಯ, ಆಶಾಲತಾ ಜೈನ್ ಇತರರು ಇದ್ದರು.