ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಭಾನುವಾರದಂದು ಗ್ರಾಮೀಣಾಭಿವೃದ್ಧಿ ಯೋಜನೆಯ ಸಪ್ತಪದಿ ಯೋಜನೆಯಲ್ಲಿ 31ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ವೈವಾಹಿಕ ಜೀವಕ್ಕೆ ಕಾಲಿರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ 1992ರಲ್ಲಿ ಶ್ರೀಕ್ಷೇತ್ರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಗೊಂಡಿದ್ದೂ ವಿವಾಹಿತರಾದ ದಂಪತಿಗಳು ಶ್ರೀಮಾತೆಯ ಅನುಗ್ರಹದಿಂದ ಸುಖ-ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ವಿವಾಹವಾದ ಜೋಡಿಗೆ ಶುಭವನ್ನು ಹಾರೈಸಿ ಶ್ರೀ ಜಗನ್ಮಾತೆಯ ಸನ್ನಿಧಿಯಲ್ಲಿ ವಿವಾಹವಾದ ವಧು-ವರರ ಜೀವನವು ಸುಖಮಯವಾಗಿರಲಿ, ಸರಳವಾಗಿರಲಿ ಹಾಗೂ ಜೀವನವು ವನವಾಗದೇ ನಂದನವನವಾಗಲಿ. ವಧು-ವರರು ಒಬ್ಬರನೊಬ್ಬರು ಅರಿತು ಬಾಳುವೆ ಮಾಡುವುದು ಬಹಳ ಶ್ರೀ ಜಗನ್ಮಾತೆಯ ಆಶೀರ್ವಾದ ರೂಪದಲ್ಲಿ ಪಡೆದ ಈ ವಸ್ತುಗಳು ಸದುಪಯೋಗವಾಗಿ ಜೀವನದ ಅಭಿವೃದ್ಧಿಯಾಗಲಿ ಎಂದು ಆಶೀರ್ವಚಿಸಿದರು.
12 ಜೋಡಿ ಸಾಮೂಹಿಕ ವಿವಾಹವು ವೇ||ಬ್ರ||ಶ್ರೀ ರವೀಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಸಾಂಗವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಲಶೇಶ್ವರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಭಟ್ ಕ್ಷೇತ್ರದ ಟ್ರಸ್ಟಿಗಳಾದ ಶ್ರೀಮತಿ ರಾಜಲಕ್ಷ್ಮೀ ಭಿ. ಜೋಷಿ, ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾ ಶಂಕರ್ ಜೋಷಿ, ಇದ್ದರು.