ಕಳಸ ಲೈವ್ ವರದಿ
ಕರ್ನಾಟಕದಲ್ಲಿ ಹಿಂದೂ ಸಮಾಜದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಅಲ್ಪ ಸಂಖ್ಯಾತ ಕೋಮಿನ ಅಪರಾಧಿಗಳನ್ನು ಶಿಕ್ಷಿಸಿ ನ್ಯಾಯ ದೊರಕಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ, ಕಳಸ ಪ್ರಖಂಡ ವತಿಯಿಂದ ಶನಿವಾರ ಕಳಸ ತಾಲ್ಲೂಕು ಕಚೇರಿಯಲ್ಲಿ ಶಿರೆಸ್ತೇಧಾರ್ ಸುಧಾ ರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಭಾರತದ ಸಂವಿಧಾನದಂತೆ ಎಲ್ಲರಿಗೂ ಸಮಾನವಾಗಿ ಬದುಕಲು ಅವಕಾಶ ನೀಡಿರುವಂತೆ ಎಲ್ಲರಿಗೂ ಸುರಕ್ಷತೆಯನ್ನು ನೀಡಬೇಕಾಗಿರುವುದು ಸರ್ಕಾರಗಳ ಕರ್ತವ್ಯ ಆದರೆ ಕರ್ನಾಟಕ ಸರ್ಕಾರವು ಒಂದು ಅಲ್ಪ ಸಂಖ್ಯಾತ ಕೋಮಿನ ಪಕ್ಷವೆಂಬಂತೆ ವರ್ತಿಸುತ್ತಾ ಬಹುಸಂಖ್ಯಾತ ಹಿಂದೂಗಳ ಮೇಲೆ ಇಷ್ಟು ದೌರ್ಜನ್ಯ ನಡೆಯುತ್ತಿದ್ದರೂ ಸುಮ್ಮನಿರುವುದು ಸಂವಿಧಾನ ವಿರುದ್ಧವಾಗಿದೆ. ಇನ್ನೂ ಸಾಲದೆಂಬಂತೆ ಅಲ್ಪ ಸಂಖ್ಯಾತರನ್ನು ಮತ್ತಷ್ಟು ಓಲೈಸಲು ಇದೇ ಸರ್ಕಾರವು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ರಘು ಸಕಲೇಶಪುರ, ಬಜರಂಗದಳ ಕಾರ್ಯಕರ್ತರಾದ ಶಿವು, ಭರತ್ ಕುಮೇಲ್, ಮಂಗಳೂರಿನ ಜಯಪ್ರಕಾಶ್, ಚಿಕ್ಕಮಗಳೂರು ಜಿಲ್ಲೆಯ ಮಂಜು ತುಡುಕೂರ್ ಮುಂತಾದ ಕಾರ್ಯಕರ್ತರ ಮೇಲೆ ಮೇಲೆ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ.
ಸಂವಿಧಾನದ ಸಂರಕ್ಷರಾದ ತಾವು ಈ ಎಲ್ಲಾ ದುರ್ಘಟನೆಗಳ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ, ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಿ. ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡುವಂತೆ ಹಿಂದೂಗಳಿಗೆ ರಕ್ಷಣೆಯನ್ನು ನೀಡುವಂತೆ, ಪ್ರಜಾಪ್ರಭುತ್ವವನ್ನು ಸಂರಕ್ಷಿಸುವಂತೆ ವಿಶ್ವ ಹಿಂದೂ ಪರಿಷದ್ ತಮ್ಮ ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಬಜರಂಗದಳ ಶೃಂಗೇರಿ ಜಿಲ್ಲಾ ಸಂಯೋಜಕ ಅಜಿಲ್ ಕುಲಾಲ್, ಧರ್ಮಪ್ರಚಾರಕ ಪ್ರಮುಖ್ ಜಗದೀಶ್ ಭಟ್, ಬಜರಂಗದಳದ ಪ್ರಮುಖರಾದ ಸಂತೋಷ್, ಕವಿರಾಜ್, ಕಿರಣ್, ಚಂದ್ರು ಇತರರು ಇದ್ದರು.