ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಹಳುವಳ್ಳಿ ಸುಂದರ ರಾಮ ಮಂದಿರದಲ್ಲಿ ಇದೇ ತಿಂಗಳ 16 ಮತ್ತು 17ರಂದು ತೈಲಾಭಿಷೇಕ, ಪವಮಾನಾಭಿಷೇಕ ಶ್ರೀ ರಾಮ ತಾರಕಹೋಮ ಮುಂತಾದ ಧಾರ್ಮಿಕ ವಿಧಿ-ವಿಧಾನಗಳ ಕಾರ್ಯಕ್ರಮ ನಡೆಯಲಿದೆ.
ಎ 16ರಂದು ಬೆಳಿಗ್ಗೆ ತೈಲಾಭಿಷೇಕ, ಪರಮಾನ ಪಾರಾಯಣ, ಪಂಚಾಮೃತ ಅಭಿಷೇಕ, ಅಲಂಕಾರ, ತುಳಸಿ ಪುಷ್ಪಗಳಿಂದ ಸಹಸ್ರಾರ್ಚನೆ. ಸಯಂಕಾಲ ಅಷ್ಠಾವಧಾನ ಸೇವೆ ನಂತರ ಜಯದೇವ ಕವಿಗಳ್ ಮತ್ತು ಭದ್ರಾಚಲ ರಾಮದಾಸ್, ತ್ಯಾಗರಾಜರ್, ಪುರಂದರ ದಾಸರು, ಕಬೀರಾಮಿರಾ ಚಂಡಿದಾಸ್ ಇತ್ಯಾದಿ ಮಹಾನ್ಗಳ ಗುರುಕೀರ್ತನೆಯೊಂದಿಗೆ ಕೋಯಮತ್ತೂರಿನ ನುರಿತ ಕಲಾವಿದರಾದ ಗಣೇಶ್ ಭಾಗವತರ್ ಸಂಗಡಿಗರಿಂದ ಭಜನೆಯನ್ನು ನರ್ತನ-ಕೀರ್ತನೆಯೊಂದಿಗೆ ಪ್ರಾಚೀನ ಸಂಪ್ರದಾಯದ ಅನುಸಾರ ನೃತ್ಯದೊಂದಿಗೆ ಅಖಂಡ ದಿವ್ಯನಾಮ ಸಂಕೀರ್ತನೆ ನಡೆಯಲಿದೆ.
ಎ 17 ರಂದು ಬೆಳಿಗ್ಗೆ ನವಗ್ರಹ ಹೋಮ, ಶ್ರೀ ರಾಮ ತಾರಕ ಹೋಮ ಮತ್ತು ಸುಂದರ ರಾಮನಿಗೆ ಸೀತಾ ಕಲ್ಯಾಣ, ಆಂಜನೇಯ ಉತ್ಸವ ನಂತರ ಉಂಚವೃತ್ತಿ ಭಜನೆಯೊಂದಿಗೆ ಸೀತಾಪರಿಣಯ, ವಿಜಯಶ್ರೀ ಮೈಸೂರು ಇವರಿಂದ ಪಂಚರತ್ನ ಕೀರ್ತನೆಗಳಿಂದ ಹಾಡುಗಾರಿಕೆ ನಡೆಯಲಿದೆ.ರಾತ್ರಿ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಇವರಿಂದ ರಾಮಾಯಣದ ಒಂದು ಭಾಗ ಯಕ್ಷಗಾನ ನಡೆಯಲಿದೆ ಎಂದು ಸುಂದರ ರಾಮ ದೇವಾಲಯದ ಮುಖ್ಯಸ್ಥರಾದ ಹೆಚ್.ಹೆಚ್. ಪುಂಡರೀಕ ಭಾಗವತರ್ ತಿಳಿಸಿದ್ದಾರೆ.