ಕಳಸ ಲೈವ್ ವರದಿ
ಬಿಜೆಪಿ ತೊರೆದ ಮೇಲೆ ಆ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಲು ನಿಮಗೆ ನೈತಿಕತೆ ಇದೆಯೇ ಎಂದು ಕಳಸ ಬಿಜೆಪಿ ಘಟಕದ ಅಧ್ಯಕ್ಷ ನಾಗಭೂಷಣ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದಲ್ಲಿದ್ದು ಮೂರು ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ ಟಿಕೇಟ್ ಸಿಗದಿದ್ದಾಗ ಅಧಿಕಾರ ದಾಹದಿಂದ ಬೇರೆ ಪಕ್ಷಕ್ಕೆ ಪಕ್ಷಾಂತರಗೊಂಡು ಚುನಾವಣೆಯಲ್ಲಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟ ಎಂ.ಪಿ ಕುಮಾರಸ್ವಾಮಿಯವರಿಗೆ ಈಗ ಬಿಜೆಪಿಯ ಬಗ್ಗೆ ಟೀಕೆ ಮಾಡಲು ಯಾವುದೇ ನೈತಿಕತೆ ಇಲ್ಲ.
ಕಳಸದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಬಿಜೆಪಿಗೆ ನಾಯಕತ್ವ ಇಲ್ಲ ಎಂದಿರುವುದು ವಿಪರ್ಯಾಸವೇ ಸರಿ.ನಮ್ಮ ಪಕ್ಷದ ಕಾರ್ಯಕರ್ತರ ಶಕ್ತಿ ಏನು ಎಂಬುದನ್ನು ನೀವು ಹಿಂದಿನ ಚುನಾವಣೆಯಲ್ಲಿ ಮನಗಂಡಿರುತ್ತೀರಿ.ತಾವು ಶಾಸಕರಾಗಿದ್ದಾಗ ಕಳಸ ಬಿಜೆಪಿಯಲ್ಲಿ ಬಕೆಟ್ ಹಿಡಿಯುವವರನ್ನೆ ಬೆಳೆಸಿ ಪಕ್ಷವನ್ನು ದುರ್ಬಲಗೊಳಿಸಿದ್ದು ನಿಮ್ಮ ಸಾಧನೆಯಲ್ಲೇ? ಆದರೆ ಕಳಸ ತಾಲ್ಲೂಕಿನ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಸಿದ್ಧಾಂತಕ್ಕೆ ಬೆಲೆಕೊಟ್ಟು ಪಕ್ಷವನ್ನು ಸಂಘಟಿಸಿರುವುದರಿಂದ ಇಂದಿಗೂ ಪಕ್ಷ ಸದೃಡವಾಗಿ ಬೆಳೆದು ನಿಂತಿದೆ.
ಕಳಸ ಸಂಘಟನೆ ವಿಧಾನಸಭೆ ತಾಲ್ಲೂಕಿನಲ್ಲಿ ಪಕ್ಷದ ಭದ್ರವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯೇ ಮುನ್ನಡೆ ಪಡೆದಿದೆ. ಈಗಿನ ಲೋಕಸಭಾ ಚುನಾವಣೆಯಲ್ಲಿ ನಾವೇ ಮುನ್ನಡೆ ಪಡೆಯುವುದು ಶತಸಿದ್ಧ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದ ಮುಖಂಡರಾದ ಎಂ.ಎ ಶೇಷಗಿರಿ, ಕೆ.ಸಿ ನಾಗೇಶ್, ಶ್ರೀಕಾಂತ್, ಕೃಷ್ಣಪ್ಪ, ಬಿ.ಕೆ ಮಹೇಶ್, ಪ್ರಸಿದ್ಧ, ಕಳಕೋಡು ರವಿ ಅವರು ನಾಗಭೂಷಣ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ
Related Stories
September 6, 2024