ಕಳಸ ಲೈವ್ ವರದಿ
ನಾನು ಸಂಸದನಾಗಿದ್ದಾಗ ಇಲ್ಲಿಯ ಇನಾಂ ಭೂಮಿ ಸಮಸ್ಯೆಯ ಬಗ್ಗೆ ನ್ಯಾಯಂಗದಲ್ಲೂ ಹೋರಾಟ ಮಾಡಿದ್ದೆ. ಅಡಿಕೆ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಅವರಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಲೋಕ ಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಕಳಸದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಬೇರೆ ಪಕ್ಷದವರು ಬಾಷಣ ಮಾಡುತ್ತಾ ಇದ್ದಾರೆ. ಅವರಿಗೆ ಅಭಿವೃದ್ಧಿ ಮಾಡುವ ಯೋಚನೆಯೇ ಇಲ್ಲ. ಹತ್ತು ವರ್ಷ ಸಂಸದರಾದವರು ಕ್ಷೇತ್ರಕ್ಕೆ ಬೇಟಿ ನೀಡಲಿಲ್ಲ. ನೀವು ಅಭ್ಯರ್ಥಿ ನೋಡಿ ಮತ ಹಾಕದ ಕಾರಣ ಗೆದ್ದ ಅಭ್ಯರ್ಥಿ ಕ್ಷೇತ್ರದ ಕಡೆ ಮುಖ ಮಾಡಿಲ್ಲ. ಈ ಹಿಂದೆ ಗೋರಕ್ ಸಿಂಗ್ ವರದಿ ಜಾರಿಯಾಗಿಲ್ಲ ಎಂದು ಹೋರಾಟ ಮಾಡುತ್ತಿದ್ದವರು ಅವರದ್ದೆ ಸರ್ಕಾರ ಇದ್ದಾಗ ವರದಿ ಬಗ್ಗೆ ಕಳೆದ 10 ವರ್ಷದಲ್ಲಿ ಚರ್ಚೆಯೆ ಮಾಡಲಿಲ್ಲ. ಯಾವುದೆ ಸಂಸದರು ಕಡತದ ಹಿಂದೆ ಹೋಗದಿದ್ದರೆ ಕೆಲಸ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ನನ್ನ 20 ತಿಂಗಳ ಅವಧಿಯಲ್ಲಿ ಏನು ಕೆಲಸ ಆಗಿದೆ ನಂತರದ ಅವಧಿಯಲ್ಲಿ ಏನು ಕೆಲಸ ಆಗಿದೆ ಎಂದು ತುಲನೆ ಮಾಡಿ ನೋಡಿ ಜನಪ್ರತಿನಿಧಿಗಳು ಜನಸಾಮಾನ್ಯರ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಈಡೇರಿಸಿದೆ.ಹಿಂದಿನ ಸರ್ಕಾರ ಏನು ಮಾಡಿದೆ? ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಎಂಬುದರ ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕು. ಗ್ಯಾರಂಟಿ ಯೋಜನೆ ಕೊಡುವುದಿಲ್ಲ ಪುಸ್ತಕದ ಒಳಗೆ ಇಟ್ಟ ನವಿಲು ಗರಿ ಮರಿ ಹಾಕುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ರು ಆದರೆ ಈಗ ಪುಸ್ತಕದ ಒಳಗೆ ಇಟ್ಟ ನವಿಲು ಗರಿ ಮರಿ ಹಾಕಿಲ್ಲ ನವಿಲು ಮೊಟ್ಟೆ ಇಟ್ಟು ಮರಿ ಮಾಡಿದೆ ಎಂದು ಹೇಳಿದರು.
ಶಾಸಕಿ ನಯನ ಮೋಟಮ್ಮ ಮಾತನಾಡಿ 20 ವರ್ಷಗಳ ಕಾಲ ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕರು ಇರಲಿಲ್ಲ ಹಾಗೆಯೆ ಹತ್ತು ವರ್ಷ ಸಂಸದರು ಇರಲಿಲ್ಲ. ಈ ಹಿಂದೆ ಹತ್ತು ವರ್ಷಗಳ ಕಾಲ ಇಲ್ಲಿ ಸಂದರಾಗಿದ್ದವರು ಈ ಭಾಗಕ್ಕೆ ಏನು ಮಾಡಿದ್ದಾರೆ ಎಂಬುದು ಪ್ರಶ್ನೆಯಾಗಿದೆ.ನಮ್ಮ ಅಭ್ಯರ್ಥಿ ಹಿಂದೆ ಎರಡು ವರ್ಷ ಸಂಸದರಾಗಿ ಮಾಡಿದ ಕೆಲಸವನ್ನು ಈಗಿನ ಸಂಸದರು ಮಾಡಲಿಲ್ಲ.ಹಿಂದೆ ಇದ್ದ ಸಂಸದರು ಕೃಷಿ ಮಂತ್ರಿ ಆಗಿದ್ದರೂ ಕೂಡ ಇಲ್ಲಿಯ ಕಾಫಿ ಮತ್ತು ಅಡಕೆ ಇನ್ನಿತರೆ ಕೃಷಿ ಸಮಸ್ಯೆ ಬಗ್ಗೆ ಹೋರಾಟ ಮಾಡಲಿಲ್ಲ. ಅದಕ್ಕಾಗಿ ಅವರದ್ದೆ ಪಕ್ಷದವರು ಅವರನ್ನು ಗೋಬ್ಯಾಕ್ ಅಂತ ಹೇಳಿ ಇಲ್ಲಿಂದ ಓಡಿಸಿ ಬೇರೆ ಹೊಸ ಮುಖವನ್ನು ತಂದು ನಿಲ್ಲಿಸಿದ್ದಾರೆ. ಆದರೆ ಜನ ಮೂರ್ಖರಲ್ಲ ನಾವು ನಮ್ಮ ಐದು ಗ್ಯಾರಂಟಿಗಳನ್ನು ತಂದು £ಜನರಿಗೆ ಮುಟ್ಟಿಸಿರುವುದರಿಂದ ದೈರ್ಯವಾಗಿ ಮುಖ ಎತ್ತಿ ಮತದಾರರ ಬಳಿ ಮತ ಕೇಳಬಹುದು.ವಿಧಾನ ಸಭಾ ಚುನಾವಣ ಸಂದರ್ಭದಲ್ಲಿ ತಾಲ್ಲೂಕಿನಾಧ್ಯಂತ 42 ಹಳ್ಳಿಗಳಲ್ಲಿ ಚುನಾವಣಾ ಬಹಿಷ್ಕಾರ ಆಗಿತ್ತು. ಆದರೆ ನಾನು ಶಾಸಕಿಯಾದ 11 ತಿಂಗತಳಲ್ಲಿ ನನಗೆ ಬಂದ ಅನುದಾನದಲ್ಲಿ ಎಲ್ಲಾ ಹಳ್ಳಿಗಳಿಗೂ ಅನುದಾನವನ್ನು ನೀಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್, ಜಿಲ್ಲಾಧ್ಯಕ್ಷ ಅಂಶುಮಂತ್, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರುಗಳಾದ ಶ್ರೀನಾಥ್, ರಾಜೇಂದ್ರ ಹೆಬ್ಬಾರ್, ಕೆ.ಸಿ.ಧರಣೇಂದ್ರ, ವಿಶ್ವನಾಥ್ ಇದ್ದರು.
ಇದಕ್ಕಿಂತ ಮುಂಚಿತವಾಗಿ ಅಭ್ಯರ್ಥಿ ಕಳಸ ಕಲಶೇಶ್ವರ ದೇವಸ್ಥಾನ ಮತ್ತು ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
Related Stories
September 6, 2024