ಕಳಸ ಲೈವ್ ವರದಿ
ಕಳಸದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಈ ಹಿಂದೆ ನಾನು ಬಿಜೆಪಿ ಪಕ್ಷದಲ್ಲಿದೆ ಆ ಸಂದರ್ಭದಲ್ಲಿ ಪಕ್ಷ ಶಿಸ್ತು ಮತ್ತು ನಿಷ್ಟೆಯಂತೆ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ನಾನು ಕಾಂಗ್ರಸ್ ಪಕ್ಷವನ್ನು ಸೇರಿದ್ದೇನೆ. ಕಾಂಗ್ರೆಸ್ ಎಲ್ಲಾ ಆಯಾಮದಲ್ಲೂ ದೇಶದ ಅಭಿವೃದ್ಧಿಯನ್ನು ಕೊಂಡೊಯ್ಯುವ ಪಕ್ಷವಾಗಿದೆ.ಕಾಂಗ್ರೆಸ್ ಗೆ ಉಜ್ವಲವಾದ ಭವಿಷ್ಯ ಇದೆ. ಒಂದೇ ಮಾತರಂ, ಜನಗನಮನ, ರಾಷ್ಟ್ರದ್ವಜ ಇದನ್ನು ಕಾಂಗ್ರೆಸ್ ಜಾರಿ ಮಾಡಿದ್ದು ಆದರೆ ಬಿಜೆಪಿಯವರು ನಮ್ದೆ ಅನ್ತಿದ್ದಾರೆ. ಬಿಜೆಪಿ ಹತ್ತು ವರ್ಷದ ಅಭಿವೃದ್ಧಿ ಶೂನ್ಯ. ಬಿಜೆಪಿ ಕೇವಲ ಹಿಂದೂ, ಮುಸ್ಲಿಂ, ಪಾಕಿಸ್ತಾನವನ್ನು ಕೇಂದ್ರವನ್ನಾವಾಗಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ಹೇಳಿದ ಅವರು ಲೋಕ ಸಭಾ ಚುನಾವಣೆ ಮುಗಿದ ನಂತರ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿ ಚುನಾವಣೆ ನಡೆಯುತ್ತದೆ ಅಲ್ಲಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಜಯಪ್ರಕಾಶ್ ಹೆಗ್ಡೆಯವನ್ನು ಗೆಲ್ಲಿಸಬೇಕು. ಕಳಸದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ ಅದನ್ನು ಇನ್ನಷ್ಟು ತುಳಿದು ಬಲಿಷ್ಟ ಆಗಲು ಬಿಡಬಾರದು. ಕಳಸದಲ್ಲಿ ಬಿಜೆಪಿಗೆ ನಾಯಕತ್ವನೇ ಇಲ್ಲ. ಪ್ರತಿಯೊಬ್ಬ ಲೀಡರುಗಳನ್ನು ನಮ್ಮ ಪಕ್ಷಕ್ಕೆ ಕರೆದುಕೊಂಡು ಬಂದು ಬಿಜೆಪಿ ಪಕ್ಷವನ್ನು ಕ್ಷೀಣಿಸಬೇಕು ಎಂದು ಹೇಳಿದರು.
Related Stories
September 6, 2024