ಕಳಸ ಲೈವ್ ವರದಿ
ಕಳಸ ಕಲ್ಲುಬಾವಿ ಅಂಗನವಾಡಿಯ ಪುಟ್ಟ ಪುಟ್ಟ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಹಾಗೂ ಮಹಿಳಾ ದಿನಾಚರಣೆಯನ್ನು ಗುರುವಾರ ಕಲ್ಲುಬಾವಿ ಅಂಗನವಾಡಿ ಕೇಂದ್ರದ ವತಿಯಿಂದ ನಡೆಸಲಾಯಿತು.
ಕಲ್ಲುಬಾವಿ ಅಂಗನವಾಡಿಯ ಸುಮಾರು 37 ಮಕ್ಕಳು ವಿವಿಧ ಮಹನೀಯರ, ದೇವರ, ಸೈನಿಕರ, ವೇಷ ಭೂಷಣಗಳನ್ನು ತೊಟ್ಟ ಮಕ್ಕಳು ವೇದಿಕೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ತಮ್ಮ ಕಲಾ ಪ್ರತಿಭೆಯನ್ನು ಪೋಷಕರು ಹಾಗೂ ನೆರೆದ ಸಾರ್ವಜನಿಕರ ಮುಂದೆ ತೋರಿಸಿದರು. ಹಾಗೂ ನೃತ್ಯಗನ್ನು ಮಾಡಿ ಗಮನ ಸೆಳೆದರು.
ಛದ್ಮವೇಷದಲ್ಲಿ ವಶಿಷ್ಠ(ಪ್ರಥಮ), ಮಹಮ್ಮದ್ ತಮಿಮ್(ದ್ವಿತೀಯ), ಅಯ್ಯನ್(ತೃತೀಯ) ಬಹುಮಾನ ಪಡೆದುಕೊಂಡರು.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ನೆನಪಿನ ಕಾಣಿಕೆ ನೀಡಲಾಯಿತು.
ಮಕ್ಕಳ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಹಸೀನ, ಕವಿಯತ್ರಿ ಮಕ್ಕಿಮನೆ ಗೀತಾ, ಸಾಹಿತಿ ವೈ.ಪ್ರೇಮ್ ಕುಮಾರ್, ಕವಿಯತ್ರಿ ಚಂಪಕಾ ರಾಘವೇಂದ್ರ, ಅಂಗನವಾಡಿ ಕಾರ್ಯಕರ್ತೆ ಸರೋಜ, ಸಹಾಯಕಿ ನಿರ್ಮಲ ಹಾಗೂ ಪೋಷಕರು ಇದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಉಷಾ, ಸ್ವಾಗತವನ್ನು ಶ್ರೀಮತಿ ಚೈತ್ರ ವಿ ನಾಥೋಡ, ಬಹುಮಾನ ವಿತರಣಾ ನಿರ್ವಹಣೆಯನ್ನು ನಿಧಿ ವಿ ಶೆಟ್ಟಿ ನೆರವೇರಿಸಿದರು.