ಕಳಸ ಲೈವ್ ವರದಿ
ಕರ್ನಾಟಕ ಜಾನಪದ ಪರಿಷತ್ತು ಕಳಸ ತಾಲ್ಲೂಕು ಘಟಕದ ವತಿಯಿಂದ ಮಾ 25ಕ್ಕೆ ಜಾನಪದ ಜಗುಲಿ ಕಾರ್ಯಕ್ರಮ ನಡೆಯಲಿದೆ.
ಕಲ್ಮಕ್ಕಿ ಬಾಲಗಣಪತಿ ಸಭಾ ಭವನದಲ್ಲಿ ಅಪರಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಜಾಪ ಕಳಸ ಘಟಕದ ಅಧ್ಯಕ್ಷ ರಜಿತ್ ಕೆಳಗೂರು ವಹಿಸಲಿದ್ದು, ಕೆಪಿಎಸ್ ಪ್ರೌಢ ಶಾಲಾ ಶಿಕ್ಷಕ ಸಂದೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕಳಸ ವಲಯ ಮೇಲ್ವಿಚಾರಕ ಶ್ರೀನಿವಾಸ್, ಕಲ್ಮಕ್ಕಿ ಶಾಲಾ ಶಿಕ್ಷ ಕುಮಾರ್, ಕಲ್ಮಕ್ಕಿ ಬಾಲಗಣಪತಿ ಸಮಿತಿ ಅಧ್ಯಕ್ಷ ವಸಂತ ಕಾರ್ಯಕ್ರಮದಲ್ಲಿ ಇರಲಿದ್ದಾರೆ.
ಈ ಸಂದರ್ಭದಲ್ಲಿ ಜನಪದ ಕಲಾವಿದ ಕುಕ್ಕೋಡು ಮಂಜೇಗೌಡರು, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕಲ್ಮಕ್ಕಿ ಶ್ರೀಮತಿ ಸೌಮ್ಯ ಸಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕಜಾಪ ಕಳಸ ಘಟಕದ ಅಧ್ಯಕ್ಷ ರಜಿತ್ ಕೆಳಗೂರು ತಿಳಿಸಿದ್ದಾರೆ
Related Stories
September 6, 2024