ಕಳಸ ಲೈವ್ ವರದಿ
ಕರ್ನಾಟಕ ರಾಜ್ಯ ಸರ್ಕಾರವು ಪ್ರಕಟಿಸಿರುವ “ಮಾಂಗಲ್ಯ ಭಾಗ್ಯ”-ಉಚಿತ ಸಾಮೂಹಿಕ ವಿವಾಹ ಯೋಜನೆಯಂತೆ ದಿ:26.04.2024 ಮತ್ತು 26.05.2024ರಂದು ಭಾನುವಾರ ಅಭಿಜಿನ್ ಲಗ್ನದಲ್ಲಿ ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ “ಉಚಿತ ಸಾಮೂಹಿಕ ವಿವಾಹ” ವನ್ನು ಏರ್ಪಡಿಸಲಾಗಿದೆ. ಈ ಯೋಜನೆಯಲ್ಲಿ ವಿವಾಹವಾಗಲು ಬಯಸುವ ವಧು ವರರು ನಿಗದಿತ ನಮೂನೆಯ ಅರ್ಜಿ ಫಾರಂಗಳನ್ನು ದೇವಾಲಯದಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನೊಂದಾಯಿಸಿಕೊಳ್ಳಲು ಕೋರಿದೆ.
26-04-2024 ನಡೆಯುವ ವಿವಾಹಕ್ಕೆ ವಧು-ವರರು ಹೆಸರು ನೊಂದಾಯಿಸಿಕೊಳ್ಳಲು 01-04-2024. ಅಂತಿಮ ದಿನಾಂಕವಾಗಿದೆ.
26-05-2024ರಂದು ನಡೆಯುವ ವಿವಾಹಕ್ಕೆ ವಧು-ವರರು ಹೆಸರು ನೊಂದಾಯಿಸಿಕೊಳ್ಳಲು 01-05-2024 ಅಂತಿಮ ದಿನಾಂಕವಾಗಿದೆ.
ವರನಿಗೆ ಪ್ರೋತ್ಸಾಹ ಧನ (ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ) 5,000, ವಧುವಿಗೆ ಪ್ರೋತ್ಸಾಹ ಧನ (ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ) 10,000/-ನೀಡಲಾಗುತ್ತದೆ.
ವಧುವಿಗೆ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು ಅಂದಾಜು ತೂಕ 8 ಗ್ರಾಂ 40,000/-ದೇವಾಲಯದಿಂದ ನೀಡಲಾಗುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಪ್ರೇಮಲತಾ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 08263-274705, 7975863211, 9739425173 ನಂ ಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಲು ಕೋರಿದೆ.
Related Stories
September 6, 2024