ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ಶನಿವಾರ ಮಳೆಗಾಗಿ ಶತರುದ್ರಾಭಿಷೇಕ, ಏಕದಶರುದ್ರಹೋಮ ಮತ್ತು ಪರ್ಜನ್ಯಜಪ, ಪರ್ಜನ್ಯಹೋಮ ಹಾಗೂ ಸುವೃಷ್ಠಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಶ್ರೀ ಕಲಶೇಶ್ವರಸ್ವಾಮಿ ಸನ್ನಿಧಿಯಲ್ಲಿ ಶತವಾರ ರುದ್ರಾಭಿಷೇಕ, ಏಕದಶರುದ್ರಾಹೋಮ, ಪರ್ಜನ್ಯಜಪ ಮತ್ತು ಪರ್ಜನ್ಯಹೋಮ ನಡೆಸಲಾಯಿತು. ಶ್ರೀ ಸರ್ವಾಂಗಸುಂದರೀ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರ ಕುಂಕುಮಾರ್ಚನೆ, ಶ್ರೀ ಆನೆವಿಘ್ನೇಶ್ವರಸ್ವಾಮಿ ಸನ್ನಿಧಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ ಮಾಡಲಾಯಿತು.
ಶ್ರೀಕ್ಷೇತ್ರಪಾಲ ಸನ್ನಿಧಿಯಲ್ಲಿ ಚರುಬಲಿ ಸಮರ್ಪಣೆ ಹಾಗೂ ಶ್ರೀ ಕಲಶೇಶ್ವರಸ್ವಾಮಿಯವರಲ್ಲಿ ಮಹಾಪೂಜೆಯ ನಂತರ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿದೆಡೆಯಿಂದ ನೂರಾರು ಭಕ್ತರು ಆಗಮಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದರು.
Related Stories
September 6, 2024