ಕಳಸ ಲೈವ್ ವರದಿ
ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಮಂಜೂರಾಗಿರುವ 2 ಕೋಟಿ ಅನುದಾನದಲ್ಲಿ ತಾಲ್ಲೂಕಿನ ವಿವಿದೆಡೆ ರಸ್ತೆ ಕಾಮಗಾರಿಗಳಿಗೆ ಶಾಸಕಿ ಶ್ರೀಮತಿ ನಯನ ಮೋಟಮ್ಮ ಚಾಲನೆ ನೀಡಿದರು.
ಹೊರನಾಡು ಹೂವಿನಹಿತ್ಲು-ಉತ್ತನಬೆಳಲು-ಗೋಳಿಬೆಳಕು ರಸ್ತೆ ಅಭಿವೃದ್ಧಿ, ಕೆಸುವಿನ ಕೊಂಡ ರಸ್ತೆ ಅಭಿವೃದ್ಧಿಗೆ ತಲಾ 15 ಲಕ್ಷ, ಹೊರನಾಡು ಗೀತೋಟ ರಸ್ತೆ ಅಭಿವೃದ್ಧಿ, ಮೇಲ್ಮನೆಯಿಂದ ಹೊಸಮಠ ಬಿ ಕಲ್ಕೋಡು ಕಾರ್ಲೆ ಸೇರುವ ರಸ್ತೆ, ಸಂಸೆ ಗ್ರಾ.ಪಂ ಸಂಪಾನೆ ರಸ್ತೆ, ಉಳ್ಳುರು ಕೋರೆ ರಸ್ತೆ, ಇಡಕಣಿ ಗ್ರಾ.ಪಂ ಹೆಮ್ಮಕ್ಕಿ –ಕಗ್ಗುಂಡಿ ರಸ್ತೆ, ಹಿರೇಬೈಲ್ ಕೋರೆ ಮುಖ್ಯರಸ್ತೆಯಿಂದ ಲೂಹಿಸ ಮನೆಯಿಂದ ಗ್ರೂಫ್ ಸೈಟ್ ರಸ್ತೆ, ಬೂದಿಗುಂಡಿ ರಸ್ತೆ ಅಭಿವೃದ್ಧಿ, ತೋಟದೂರು ವಾಸನಕೂಡಿಗೆ ಸಿಸಿ ರಸ್ತೆ ಅಭಿವೃದ್ಧಿ, ತಲಗೋಡು ಹಳ್ಳದಾಚೆ ತಾರಿಕೊಂಡ ರಸ್ತೆ, ತನೂಡಿ ಕಾಳಿಪಾಲು ಸಿಸಿ ರಸ್ತೆ ಅಭಿವೃದ್ಧಿ, ಹೊರನಾಡು ಶೃಂಗೇರಿ ಮುಖ್ಯ ರಸ್ತೆಯಿಂದ ಬಲಿಗೆ ಪಾಶ್ರ್ವನಾಥ ಬಸದಿ ರಸ್ತೆ, ಹಿನಾರಿ ಹಂದಿಹಡ್ಲು ರಸ್ತೆ, ಕಳಸ ಮಹಾವೀರ ರಸ್ತೆ, ಮೈದಾಡಿ ಮೈತಲಖಾನ್ ರಸ್ತೆ, ಬೈನಕೊಂಡ ರಸ್ತೆ, ಕೆಳಮರಸಣಿಗೆ ಮುಳ್ಳಿನಕೊಂಡ ಕಾಲೋನಿ ರಸ್ತೆ ಅಭಿವೃದ್ಧಿಗೆ ತಲಾ 10 ಲಕ್ಷ ರೂ ಅನುದಾನ ನೀಡಿ ಅಭಿವೃದ್ಧಿ ಪಡಿಸಲಾಗುತ್ತದೆ.
ಇದೇ ವೇಳೆ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಪ್ರವಾಹದಿಂದಾಗಿ ಹಾನಿಯಾದ ರಾಜೀವಿ, ರೋನಿ ಸಿಕ್ವೇರಾ, ಸರೋಜಿನಿ, ಸೀತು ಕುಟುಂಬಕ್ಕೆ ಸರ್ಕಾರದ ಚೆಕ್ ವಿತರಣೆ ಸಹ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭಾಕರ ಗೌಡ, ಶ್ರೇಣಿಕ್, ವಿಶ್ವನಾಥ್ ಮರಸಣಿಗೆ, ಜಗದೀಶ್ ಭಂಡಾರಿ, ವೀರೇಂದ್ರ ಜೈನ್, ಮಹಮ್ಮದ್ ರಫೀಕ್, ಕೆ.ಸಿ.ಮಹೇಶ್ ಇದ್ದರು.