ಕಳಸ ಲೈವ್ ವರದಿ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಾಧಿಕಾರದ ಸದಸ್ಯರನ್ನಾಗಿ ಕಳಸ ಎ.ಎಸ್.ಗಣೇಶ್ ಅವರನ್ನು ಸರ್ಕಾರದ ಕಾರ್ಯದರ್ಶಿ ಡಾ|| ಪ್ರಕಾಶ್ ಜಿ.ಸಿ ನೇಮಕ ಮಾಡಿದೆ.
ಪಂಚ ಗ್ಯಾರಂಟಿಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷಮೀ ಹಾಗೂ ಯುವ ನಿಧಿ ಯೋಜನೆಯ ಲಾಭಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಕಾರ್ಯವಿಧಾನಗಳನ್ನು ಜಾರಿಗೆ ತರಲು ಚಿಕ್ಕಮಗಳೂರು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.
ಅಧ್ಯಕ್ಷರನ್ನಾಗಿ ಚಿಕ್ಕಮಗಳೂರಿಒನ ಎಂ.ಸಿ.ಶಿವಸ್ವಾಮಿ, ಉಪಾಧ್ಯಕ್ಷರುಗಳಾಗಿ ಸಕ್ಕರಾಯಪಟ್ಟಣದ ಎಸ್.ಎನ್.ಮಂಜುನಾಥ್, ತರಿಕೆರೆ ಸಮೀವುಲ್ಲಾ ಶರೀಫ್, ಅಲ್ದೂರು ಹೆಚ್.ಎಸ್.ಕೃಷ್ಣೇ ಗೌಡ, ಕಡೂರು ಚಂದ್ರ ಮೌಳಿ ಸೇರಿದಂತೆ ಹದಿನೈದು ಜನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
Related Stories
September 6, 2024