ಕಳಸ ಲೈವ್ ವರದಿ
ಶಿವರಾತ್ರಿ ಪ್ರಯುಕ್ತ ಮಾರ್ಚ್ 8ರಂದು ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10.00 ರಿಂದ 12.30, ಸಂಜೆ 7.00 ರಿಂದ 10.00, ರಾತ್ರಿ 12.30 ಯಿಂದ 2.30 ಗಂಟೆ ವರೆಗೆ ಶ್ರೀ ಕಲಶೇಶ್ವರಸ್ವಾಮಿ ದೇವರಿಗೆ ಶತ ರುದ್ರಾಭಿಷೇಕ, ಏಕದಶವಾರು ರುದ್ರಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ನಡೆಯುತ್ತದೆ.
ಸೇವೆ ಮಾಡಲು ಇಚ್ಛಿಸುವ ಭಕ್ತಾದಿಗಳು ಸೇವಾ ಕೌಂಟರ್ ನಲ್ಲಿ ರಸೀದಿ ಪಡೆದು ಸಂಕಲ್ಪ ಮತ್ತು ದೇವರ ದರ್ಶನ ಪಡೆಯ ಬಹುದು.
ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ 1:00 ಯಿಂದ ಮತ್ತು ಸಂಜೆ 7:30 ರಿಂದ ಪ್ರಸಾದ ವ್ಯವಸ್ಥೆ ಇರುತ್ತದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6:30 ರಿಂದ ಮಹಿಳಾ ತಂಡದವರಿಂದ ಭಜನೆ ಕಾರ್ಯಕ್ರಮ ಮತ್ತು ಕಲಾ ಸಿಂಚನ ಮಹಿಳಾ ತಾಂಡವರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾತ್ರಿ 10:00 ಗಂಟೆಯಿಂದ ಹೊಳ್ಳಾಸ್ ಶ್ರೀ ಚನ್ನಕೇಶವ ಯಕ್ಷಗಾನ ಕಲಾ ಪ್ರತಿಷ್ಠಾನ ಗೊರಸುಕುಡಿಗೆ ಬಾಳೆಹೊಳೆ ಇವರಿಂದ “ಪ್ರಸಂಗ ಭೀಷ್ಮ ಪ್ರತಿಜ್ಞೆ ಮತ್ತು ಮೀನಾಕ್ಷಿ ಕಲ್ಯಾಣ” ಎಂಬ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೋರಿದೆ.
ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು /ಸದಸ್ಯರು ಕೇಳಿಕೊಂಡಿದ್ದಾರೆ.
Related Stories
September 6, 2024