ಕಳಸ ಲೈವ್ ವರದಿ
2022ರಲ್ಲಿ ಶಂಕರಾಚಾರ್ಯರ ಪ್ರತಿಮೆಗೆ ಮಸೀದಿಯಿಂದ ಬಾವುಟತಂದು ಹೊದೆಸಿದ್ದು ಬಜರಂಗದಳ ಪೋಷಿಸಿದ್ದ ಕಾರ್ಯಕರ್ತ ಅಲ್ಲ ಆತನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಜರಂಗದಳ ಶೃಂಗೇರಿ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಟಿ.ಡಿ ರಾಜೇಗೌಡರು ಸದನದಲ್ಲಿ 2022ರಲ್ಲಿ ಶಂಕರಾಚಾರ್ಯರ ಪ್ರತಿಮೆಗೆ ಮಸೀದಿಯಿಂದ ಬಾವುಟತಂದು ಹೊದೆಸಿದ್ದು ಬಜರಂಗದಳ ಪೋಷಿಸಿದ್ದ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ.ಈ ಸಂಬಂದ ನ್ಯಾಯಲಯದಲ್ಲಿ ತನಿಖೆ ನಡೆಯುತ್ತಿರುವಾಗ ಅದರ ಬಗ್ಗೆ ಸದನದಲ್ಲಿ ಚರ್ಚಿಸುವುದು ಕಾನೂನು ಬಾಹಿರ ಅಲ್ಲವೇ, ಅಥವಾ ಸಾಮಾನ್ಯರಿಗೊಂದು ನ್ಯಾಯ ಶಾಸಕರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ತಮ್ಮನ್ನು ತಾವು ಪ್ರಚಾರ ಪಡಿಸಿಕೊಳ್ಳಲು ಪದೇ ಪದೇ ಬಜರಂಗದಳದ ಹೆಸರನ್ನು ಎಳೆದು ತರುತಿದ್ದಾರೆಂಬ ಅನುಮಾನ ಬಜರಂಗದಳದ ಕಾರ್ಯಕರ್ತರಲ್ಲಿ ಮೂಡುತ್ತಿದೆ ಎಂದು ತಿಳಿಸಿದ್ದಾರೆ.
Related Stories
September 6, 2024