ಕಳಸ ಲೈವ್ ವರದಿ
ಇತ್ತೀಚೆಗೆ ದರೋಡೆ ನಡೆದ ಹೊಸಳ್ಳಿ ಅನಂತ ಹೆಬ್ಬಾರ್ ಅವರ ಮನೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಶೃಂಗೇರಿ ಜಿಲ್ಲಾ ಸಂಯೋಜಕರಾದ ಅಜಿತ್ ಕುಲಾಲ್ ಭಾರತೀಯ ಜನತಾ ಪಾರ್ಟಿ ಕಳಸ ಹೋಬಳಿ ಅಧ್ಯಕ್ಷರಾದ ನಾಗಭೂಷಣ್ ಮತ್ತು ಭಜರಂಗದಳ ಪ್ರಮುಖರು ಹರೀಶ್ ಅರಮನೆ ತಲಗೂರು ಅವರು ಭೇಟಿ ನೀಡಿ ಧೈರ್ಯ ತುಂಬಿದರು.
ಪೆ 15ರ ರಾತ್ರಿ ಹೊಸಳ್ಳಿ ಅನಂತ ಹೆಬ್ಬಾರ್ ಮನೆಗೆ ಮಂಗಳೂರು ಮೂಲದ ಐವರು ಮಧ್ಯರಾತ್ರಿ ಮನೆಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ನಗದು, ಚಿನ್ನಾಭರಣ ದೋಚಿದ್ದರು. ಬಿಡಿಸಲು ಬಂದ ಕಾರ್ಮಿಕನ ಕೈ ಕೂಡ ಕಡಿದಿದ್ದರು. ಕೂಡಲೆ ಸ್ಥಳೀಯರು ಒಬ್ಬನನ್ನು ಹಿಡಿದಿದ್ದರು.ಅಲ್ಲದೆ ಕೆಲವೇ ದಿನದಲ್ಲಿ ಪೊಲೀಸರು ಒಟ್ಟು ಐವರು ಆರೋಪಿಗಳನ್ನು ಹಿಡಿದು ಬಂಧಿಸಿದ್ದರು.
ಈ ಕೃತ್ಯದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರುವ ಬಗ್ಗೆ ತಿಳಿಸಿದ್ದಾರೆ.ಈ ಆರೋಪಿಗಳನ್ನು ಕೂಡ ಆದಷ್ಟು ಬೇಗ ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೆÇಲೀಸ್ ಇಲಾಖೆಗೆ ಒತ್ತಡ ಹೇರುವ ಬಗ್ಗೆ ಅನಂತ ಹೆಬ್ಬಾರ್ ರವರಿಗೆ ಅಜಿತ್ ಕುಲಾಲ್, ನಾಗಭೂಷಣ್, ಮತ್ತು ಹರೀಶ್ ಭರವಸೆ ನೀಡಿದರು…
ಮಲೆನಾಡು ಭಾಗದಲ್ಲಿ ರಾತ್ರಿ ಸಮಯದಲ್ಲಿ ಐಷಾರಾಮಿ ಕಾರುಗಳಲ್ಲಿ ಗೋ ಕಳ್ಳತನ ಹೆಚ್ಚುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನಹರಿಸಬೇಕು ಹಾಗೂ ಹಳ್ಳಿಗಳಿಗೆ ಬೇರೆ ಬೇರೆ ಭಾಗಗಳಿಂದ ವ್ಯಾಪಾರಕ್ಕೆ ಬರುವವರ ಬಗ್ಗೆ ಮಾಹಿತಿ ಕಲೆಹಾಕಬೇಕು ಬೆಳಿಗ್ಗೆ ವ್ಯಾಪಾರಕ್ಕೆ ಬಂದಾಗ ಮನೆಯ ಸುತ್ತಮುತ್ತ ಗಮನಿಸಿ ರಾತ್ರಿವೇಳೆ ಕಳ್ಳತನ ಮಾಡುವ ಕೆಲಸ ನಡೆಯುತ್ತಿದೆ ಈ ಬಗ್ಗೆ ಕೂಡ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
Related Stories
September 6, 2024