ಕಳಸ ಲೈವ್ ವರದಿ
ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆದಿದೆ. ಈ ಪ್ರಾಣಪ್ರತಿಷ್ಠೆ ಆದ 48 ದಿನಗಳ ಕಾಲ ಇಲ್ಲಿ ಮಂಡಲೋತ್ಸವ ನಡೆಯುತ್ತಿದೆ.ಈ 48 ದಿನ ನಡೆಯುವ ಮಂಡಲೋತ್ಸವದ ಪೈಕಿ ಎರಡು ದಿನಗಳ ಮಂಡಲೋತ್ಸವದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಕಳಸದ ಮೂವರು ಪುರೋಹಿತರು ಪೆ 21ರಂದು ಅಯೋಧ್ಯೆಗೆ ಪ್ರಯಾಣ ಬೆಳಸಲಿದ್ದಾರೆ.
ಕಳಸ ಕಲಶೇಶ್ವರ ದೇವಸ್ಥಾನದ ಅರ್ಚಕ ಗಣೇಶ್ ಐತಾಳ್,ಅವರ ಮಗ ರಾಮಕೃಷ್ಣ ಐತಾಳ್ ಸೇರಿದಂತೆ ಅದಿತ್ಯ ಆಡಿಗ ಮತ್ತು ಶೃಂಗೇರಿಯ ಶ್ರೀಕೃಷ್ಣ ಭಟ್, ಸಾಲಿಗ್ರಾಮದ ಪ್ರಸನ್ನ ಆಡಿಗ ಕೂಡ ಇವರ ಜೊತೆಯಲ್ಲಿ ಪೂಜೆಗೆ ತೆರಳಲಿದ್ದಾರೆ.
ಪೆ 23 ಮತ್ತು 24 ರಂದು ನಡೆಯುವ ಮಂಡಲೋತ್ಸವದಲ್ಲಿ ಇವರು ಭಾಗಿಗಳಾಗಿ ಪೂಜೆಯನ್ನು ನೆರವೇರಿಸಲಿದ್ದಾರೆ.
ಪ್ರಾಣಪ್ರತಿಷ್ಠೆ ಆದ ನಂತರದಲ್ಲಿ 48 ದಿನಗಳ ಮಂಡಲೋತ್ಸವ ನಡೆಯುತ್ತಿದೆ.ಮಂಡಲೋತ್ಸವದಲ್ಲಿ ಮೊದಲ 44 ದಿನ ನಿತ್ಯವೂ ಹೋಮ,ಹವನದ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತಣ್ತಿನ್ಯಾಸ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ.ಸಂಜೆ ನಿತ್ಯವೂ ಉತ್ಸವ ನಡೆಯಲಿದೆ.ಕೊನೆಯ ನಾಲ್ಕು ದಿನಗಳು ಸಹಸ್ರ ಕಲಾಶಾಭಿಷೇಕ ನಡೆಯಲಿದೆ.ಇದರಲ್ಲಿ ಎರಡು ದಿನಗಳ ಕಾಲ ಪೂಜೆಯಲ್ಲಿ ಪಾಲ್ಗೊಳ್ಳಲು ನಮಗೆ ಆಹ್ವಾನ ನೀಡಿದ್ದಾರೆ.ನಮ್ಮ 5 ಜನರ ತಂಡ ಪೆ 21 ಕ್ಕೆ ಅಯೋದ್ಯೆಗೆ ಪ್ರಯಾಣ ಬೆಳಸಲಿದ್ದೇವೆ ಎಂದು ಗಣೇಶ್ ಐತಾಳ್ ಕಳಸ ಲೈವ್ ಗೆ ಮಾಹಿತಿ ನೀಡಿದ್ದಾರೆ.
ಈ ಮಂಡಲೋತ್ಸವದ ಪೂಜಾ ವಿಧಿವಿಧಾನದಲ್ಲಿ ಕಳಸದ ಪುರೋಹಿತರಿಗೆ ಭಾಗಿಯಾಗಲು ಅವಕಶಾಶ ಸಿಕ್ಕಿರುವುದು ಕೂಡ ಕಳಸಕ್ಕೆ ಹೆಮ್ಮೆ ತಂದಿದೆ.