ಕಳಸ ಲೈವ್ ವರದಿ
ಕಳಸ-ಹೊರನಾಡು ಮಧ್ಯೆ ಹೆಬ್ಬೋಳೆಯ ಭದ್ರಾ ನದಿಯಲ್ಲಿ ಕುರಿಗಳನ್ನು ಕಡಿದು ವಾಮಚಾರ ಮಾಡಲಾಯಿತೇ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಇಲ್ಲಿ ನಾಲ್ಕು ಕುರಿಗಳನ್ನು ಕಡಿದು ನದಿಗೆ ಎಸೆದು ಸ್ಥಳದಲ್ಲಿ ಪೂಜಾ ಸಾಮಾಗ್ರಿಗಳು ಬುಧವಾರ ದೊರೆತ ಹಿನ್ನಲೆಯಲ್ಲಿ ಇಲ್ಲಿ ದೊಡ್ಡ ಮಟ್ಟದಲ್ಲಿ ವಾಮಾಚಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ರಾತೋ ರಾತ್ರಿ ಇಲ್ಲಿ ಈ ಘಟನೆ ನಡೆದಿದ್ದು, ನದಿಯ ದಡದಲ್ಲಿ ಕುಂಕುಮ, ಅರಶಿನ, ಕಾಯಿ, ಲಿಂಬೆಹುಳಿ, ಹೂ, ಬಾಳೆಹಣ್ಣು ಹಾಗೂ ಇನ್ನಿತರೆ ಸಾಕಷ್ಟು ಪೂಜಾ ಸಾಮಾಗ್ರಿಗಳನ್ನು ಬಳಸಿ ಪೂಜೆ ಮಾಡಿರುವ ಬಗ್ಗೆ ಇಲ್ಲಿ ಚಿತ್ರಣದಲ್ಲಿ ಗೊತ್ತಾಗುತ್ತದೆ.
ಅಲ್ಲದೆ ಅದೇ ಸ್ಥಳದಲ್ಲಿ ನಾಲ್ಕು ಕುರಿಗಳ ತಲೆ ಕಡಿದು ಕುರಿಯನ್ನು ನದಿಗೆ ಎಸೆದು ಹೋಗಿದ್ದಾರೆ.ಈ ಕುರುಹುಗಳನ್ನು ಕಂಡ ಸ್ಥಳಿಯರು ಕೂಡಲೇ ಕಳಸ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಪಿಡಿಒ ಕವೀಶ್, ಕಳಸ ಪಿಎಸ್ಐ ಬ್ರಮ್ಮಪ್ಪ ಬಿಳಗಲಿ, ಎಎಸೈ ಮೋಹನ್ ರಾಜಣ್ಣ ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.ನದಿಯಲ್ಲಿ ಕುರಿಯ ಕಳೆ ಬರಹವನ್ನು ಮೇಲಕ್ಕೆ ತೆಗೆದು ಹೂತು ಹಾಕಲಾಯಿತು.
ಘಟನೆ ಬಗ್ಗೆ ಸ್ಥಳಿಯರು ಅಸಮಾದಾನ ವ್ಯಕ್ತಪಡಿಸಿದ್ದು, ಇದು ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಟೆಂಟ್ ಹಾಕಿ ಇಲ್ಲಿ ಪೂಜೆ ಮಾಡಲಾಗುತ್ತಿತ್ತು.ಮಧ್ಯ ರಾತ್ರಿ ಇಲ್ಲಿ ವಾಮಾಚಾರ ಮಾಡಲಾಗಿದೆ.ಸಾವಿರಾರು ಜನ ಕುಡಿಯುತ್ತಿರುವ ನೀರಿಗೆ ಕುರಿಗಳನ್ನು ಕಡಿದು ಹಾಕಿರುವುದು ಸರಿಯಲ್ಲ ಎಂಬ ಬೇರಸವನ್ನು ವ್ಯಕ್ತಪಡಿಸುತ್ತಾರೆ.