ಕಳಸ ಲೈವ್ ವರದಿ
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪರಂಪರೆ ಕೂಟ ಮತ್ತು ಐ.ಕ್ಯೂ.ಎ.ಸಿ ಸಹಭಾಗಿತ್ವದಲ್ಲಿ ನಡೆದ “ಶ್ರೀ ಕಲಶೇಶ್ವರ ದೇವಾಲಯದ ಶಾಸನಗಳು: ಒಂದು ಕ್ಷೇತ್ರಾಧ್ಯಯನ” ಎಂಬ ವಿಷಯದ ಕುರಿತಾಗಿ ಕಾರ್ಯಾಗಾರವನ್ನು ವಿಶ್ರಾಂತ ಕೃಷಿ ಅಧಿಕಾರಿ ಮತ್ತು ಕರ್ನಾಟಕ ಇತಿಹಾಸ ಅಕಾದೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಚ್.ಆರ್ ಪಾಂಡುರಂಗ ರವರು ನಡೆಸಿಕೊಟ್ಟರು.
ಕಲಶೇಶ್ವರ ದೇವಾಲಯದ ಆವರಣದಲ್ಲಿರುವ ಶಾಸನಗಳ ಕುರಿತು ಮಾತನಾಡಿದ ಅವರು ಕಲಶನಾಥನಿಗೆ ಅರಸು ಮನೆತನಗಳು ನೀಡಿದ ದಾನ ದತ್ತಿಗಳು, ದೇವಾಲಯದ ನಿರ್ಮಾಣ, ಕಳಸ ಪರಿಸರದ ಭೌಗೋಳಿಕ ಮತ್ತು ಚಾರಿತ್ರಿಕ ಹಿನ್ನೆಲೆ, ಈ ಪರಿಸರವನ್ನು ಆಳಿದ ಅರಸರ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜೊತೆಗೆ ವಿಜಯನಗರ ಅರಸರ ಕಾಲದ ಕೆಲವು ಶಾಸನಗಳನ್ನು ಓದಿ ಅರ್ಥೈಸುವುದರ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಲಿಪಿಯ ವಿಕಾಸ ಮತ್ತು ಬೆಳವಣಿಗೆಯ ಹಂತಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಿನಯ ಕುಮಾರ ಶೆಟ್ಟಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ, ಐ.ಕ್ಯೂ.ಎ.ಸಿ ಸಂಚಾಲಕ ಡಾ.ಆದಿತ್ಯ ಅಡಿಗ ಎ.ಜಿ, ಇತಿಹಾಸ ಉಪನ್ಯಾಸಕರಾದ ಡಾ.ಸುನೀಲ್ ಕೆ.ಎಮ್, ಪೂರ್ಣೇಶ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮೊಹಮದ್ ಇರ್ಫಾನ್ ಸ್ವಾಗತಿಸಿದರೆ ಪ್ರಗತಿ ಡಿ.ಡಿ ವಂದಿಸಿದರು.