ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆಯ 12ನೇ ಅಧ್ಯಕ್ಷರಾಗಿ ಶ್ರೀಕಾಂತ್ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
ಜೆಸಿಐ ವಲಯ 14ರ ಅಧ್ಯಕ್ಷೆ ಆಶಾ ಜೈನ್ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು. ನಿರ್ಗಮಿತ ಅಧ್ಯಕ್ಷ ಚರಣ್ ಅವರಿಂದ ನೂತನ ಅಧ್ಯಕ್ಷ ಶ್ರೀಕಾಂತ್ ಅಧಿಕಾರ ಸ್ವೀಕರಿಸಿದರು.ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ರಾಕೇಶ್. ಜಿ ಪ್ರಮಾಣ ವಚನ ಬೋಧಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ಸುಧಾಕರ್, ಮುರುಳಿಧರ್, ಸಂತೋಷ್.ಎಂ.ಎಸ್, ವಿಜಯ್, ಶಿವಪ್ರಸಾದ್ ಎಂ, ಸುನಿಲ್ ಆಚಾರ್ಯ, ಮಧುಗೌಡ, ಮಾರುತೇಶ್, ತನ್ವಿರ್ ಜಯಪ್ರಕಾಶ್ ಇವರಿಗೆ ನೂತನ ಅಧ್ಯಕ್ಷ ಶ್ರೀಕಾಂತ್ ಪ್ರಮಾಣ ವಚನ ಬೋಧಿಸಿದರು.
ಕಳಸ ಅನ್ನಪೂರ್ಣೇಶ್ವರಿ ಬಸ್ಸ್ ಮಾಲಿಕ ಕೆ.ಕೆ.ಬಾಲಕೃಷ್ಣ ಭಟ್, ಕಳಸ ಜೆಸಿಐ ಸ್ಥಾಪಕ ಅಧ್ಯಕ್ಷ ಜಗದೀಶ್ ನಾಯ್ಕ್, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಹೆಚ್.ಆರ್ ಇದ್ದರು.