ಕಳಸ ಲೈವ್ ವರದಿ
ಕಳಸ ತಾಲೂಕಿನಾದ್ಯಂತ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಳಸ ತಾಲೂಕು ಆಡಳಿತ ವತಿಯಿಂದ ಕಳಸ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ದಂಡಾಧಿಕಾರಿ ಎಂ.ಬಸವರಾಜ್ ರಾಷ್ಟ್ರದ್ವಜಾರೋಹಣ ಮಾಡಿದರು.ಕಳಸ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್ ಕಳಸ ಪಿಎಸೈ ನಿತ್ಯಾನಂದ ಗೌಡ ಇದ್ದರು.
ಕಳಸÀ, ಸಂಸೆ, ಹೊರನಾಡು, ಇಡಕಣಿ, ಮರಸಣಿಗೆ, ತೋಟದೂರು ಗ್ರಾಮ ಪಂಚಾಯಿತಿಗಳಲ್ಲಿ ದ್ವಜಾರೋಹಣ ನಡೆಸಲಾಯಿತು. ನ್ಯಾಯಾಲಯ, ನಾಡ ಕಛೇರಿ ,ಪೋಲಿಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಅರಣ್ಯ ಇಲಾಖೆ, ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ದ್ವಜಾರೋಹಣ ನೆರವೇರಿಸಿ ಸಿಹಿತಿಂಡಿ ಹಂಚಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಸಣಿಗೆಯಲ್ಲಿ 75 ನೇ ಗಣರಾಜ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಸುಚಿತ್ರಾ ಮೇಡಂ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಬಂದಿರುವ ಅತಿಥಿಗಳು ಪುಷ್ಪ ಸಮರ್ಪಣೆ ಮಾಡುವುದರ ಮೂಲಕ ಕಾಯಕ್ರಮಕ್ಕೆ ಶುಭಕೋರಿದರು.
ನಂತರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂತೋμï ಧ್ವಜಾರೋಹಣ ನಡೆಸಿಕೊಟ್ಟರು. ಈ ದಿನದ ವಿಶೇಷತೆ ಎಂದರೆ ಕಾರ್ಯಕ್ರಮದ ನಿರೂಪಣೆ ಯನ್ನು ಮಕ್ಕಳು ಮಾಡುವುದರ ಮೂಲಕ ಎಲ್ಲರನ್ನು ಖುಷಿ ಪಡಿಸಿದರು. ಒಂದು ಮತ್ತು ಎರಡನೇ ತರಗತಿ ಮಕ್ಕಳು ಎಲ್ಲರಿಗೂ ಸಂವಿಧಾನದ ಪೂರ್ವ ಪೀಠಿಕೆ ಯನ್ನು ಹೇಳಿಕೊಟ್ಟರು. ನಂತರ ಮಕ್ಕಳು ಕನ್ನಡ, ಇಂಗ್ಲಿμï, ಹಿಂದಿಯಲ್ಲಿ ಸ್ಪಷ್ಟವಾಗಿ ಭಾಷಣ ಮಾಡುವುದರ ಮೂಲಕ ಎಲ್ಲರನ್ನು ಬೆರಗು ಗೊಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್ ಮರಸಣಿಗೆ ಇರುವ ಮಕ್ಕಳನ್ನು ಉದ್ದೇಶಿಸಿ ಎಲ್ಲರೂ ಉತ್ತಮ ಶಿಕ್ಷಣ ವನ್ನು ಪಡೆಯ ಬೇಕು. ಗುರುಗಳು ಹೇಳಿದ ಪಾಠವನ್ನು ಶ್ರದ್ಧೆ ಇಂದ ಕಲಿಯಬೇಕು ಆ ಮೂಲಕ ಬಲಿಷ್ಠ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಅಮೂಲ್ಯವೆಂದು ತಿಳಿಸಿದರು. ಭಾರತಾಂಭೆ, ಅಂಬೇಡ್ಕರ್ ಹಾಗೂ ದೇಶದ ಮೊದಲ ಮಹಿಳಾ ಶಿಕ್ಷಕಿಯಾದ ಸಾವಿತ್ರಿ ಬಾಯಿ ಫುಲೆ ವೇಷ ಧರಿಸಿದ ಮಕ್ಕಳು ಎಲ್ಲರ ಗಮನ ಸೆಳೆದರು. ಅಂತಿಮವಾಗಿ ಸಹ ಶಿಕ್ಷರಾದ ಉದಯ್ ರವರು ವಂದನಾರ್ಪಣೆ ಮಾಡಿದರು
Related Stories
September 6, 2024