ಕಳಸ ಲೈವ್ ವರದಿ
ಆಸರೆ ಫೌಂಡೇಶನ್(ರಿ) ಕಳಸ ವತಿಯಿಂದ ಜನವರಿ26ರಂದು ಸಾರ್ವಜನಿಕ ಸೇವೆಗಾಗಿ ಕಳಸ ಪಟ್ಟಣಕ್ಕೆ ಆಂಬ್ಯಲೆನ್ಸ್ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ.
ಕಳಸ ಹೈಸ್ಕೂಲ್ ಆವರಣದಲ್ಲಿ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು,ಕಾರ್ಯಕ್ರಮದ ದಿವ್ಯ ಉಪಸ್ಥಿತಿ ಅವದೂತ ಶ್ರೀ ವಿನಯ ಗುರೂಜಿ ಇರಲಿದ್ದಾರೆ ಗೌರವ ಉಪಸ್ಥಿತಿಯಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟ ಕೊಪ್ಪ ಇದರ ಪ್ರಧಾನ ಕಾರ್ಯದರ್ಶಿ ಸುಧೀರ್ ಮುರೋಳಿ, ಕಳಸ ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಕೆ.ಕೆ.ಬಿ ಬಸ್ಸು ಮಾಲಿಕರಾದ ಕೆ.ಕೆ.ಬಾಲಕೃಷ್ಣ ಭಟ್, ಕೊಪ್ಪ ಮಲ್ನಾಡ್ ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ನುಗ್ಗಿ ಮಂಜುನಾಥ್, ವಿಜಯಕುಮಾರ್ ಕೋಡಿಯಾಲ್ ಬೈಲ್ ಇರಲಿದ್ದಾರೆ.
ಮನೋರಂಜನಾ ಕಾರ್ಯಕ್ರಮ ಅಂಗವಾಗಿ ಕಲಾ ಸಂಗಮ ಶಿವದೂತೆ ಗುಳಿಗೆ ತಂಡದಿಂದ ಮಣಿಕಂಠ ಮಹಿಮೆ ಅದ್ದೂರಿ ತುಳು ಪೌರಣಿಕ ನಾಟಕ ಇರಲಿದೆ.
(ವಿ.ಸೂ. ಕಾರ್ಯಕ್ರಮದ 10 ನಿಮಿಷ ಮುಂಚಿತವಾಗಿ ಬಂದು ನಿಮ್ಮ ಆಸನ ಕಾಯ್ದಿರಿಸಿ)
Related Stories
September 6, 2024