ಕಳಸ ಲೈವ್ ವರದಿ
ಕಳೆದ ಆಗಸ್ಟ್ ಮಾಹೆಯಲ್ಲಿ ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ದಾವಣಗೆರೆಯ ಕೊಂಡಜ್ಜಿಯಲ್ಲಿ ನಡೆದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಕಳಸದ ಜೆಇಮ್ ಶಾಲೆಯ 19 ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಉತ್ತೀರ್ಣರಾದವರಲ್ಲಿ ಜಿಲ್ಲೆಯಿಂದ 6 ವಿದ್ಯಾರ್ಥಿಗಳು ಜಿಲ್ಲೆಯಿಂದ ದಿನಾಂಕ 19/01/2024ರಂದು ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲರು ಕೊಡಮಾಡುವ ರಾಜ್ಯಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದು ಇದರಲ್ಲಿ ಕಳಸದ ಜೆಇಎಮ್ ಶಾಲೆಯ ಕೆ.ಬಿ ಭುವನ್ (ಕೆ.ಕೆ.ಬಿ ಮಾಲಿಕರಾದ ಬಾಲಕೃಷ್ಣ ಭಟ್ ರವರ ಪುತ್ರ), ಕೆ.ಜೆ ದಿಗಂತ್ ಜೈನ್ (ವಿನಯ ಮತ್ತು ಜಯಕುಮಾರ್ ಕಳಸ ಇವರ ಪುತ್ರ) ಆಯ್ಕೆಯಾಗಿ ಶುಕ್ರವಾರ ರಾಜ್ಯಪುರಸ್ಕಾರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಶಾಲಾವರಣದಲ್ಲಿ ಪ್ರತೀ ಶನಿವಾರ ತರಬೇತಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸುವುದರೊಂದಿಗೆ ಜೆಇಎಮ್ ಶಾಲೆಯ ಮಹಾತ್ಮಗಾಂಧಿ ಸ್ಕೌಟ್ ಘಟಕ ಉತ್ತಮ ತಂಡವಾಗಿ ಹೊರಹೊಮ್ಮುತ್ತಿರುವುದಕ್ಕೆ ಶಾಲಾ ಆಡಳಿತಮಂಡಳಿ ಸಹಕಾರ ಮತ್ತು ಸಕಾಲದಲ್ಲಿ ಜಿಲ್ಲಾ ಸಂಸ್ಥೆಯ ಮಾರ್ಗದರ್ಶನವೇ ಕಾರಣ ಎಂದು ತರಭೇತುದಾರ ಹೆಚ್.ಆರ್.ಪ್ರಶಾಂತ್ ತಿಳಿಸಿದ್ದಾರೆ.