ಕಳಸ ಲೈವ್ ವರದಿ
ಕಳಸ ತಾಲೂಕು ಸಂಸೆ ಗ್ರಾಮದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಜಮೀನಿನಲ್ಲಿ ಯಂತ್ರಶ್ರೀ ಕಾರ್ಯಕ್ರಮದ ಮೂಲಕ ಅನುಷ್ಠಾನಿಸಿದ ಕೃಷಿ ತಾಕುವಿನಲ್ಲಿ ಭತ್ತ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಗುರುವಾರ ನೆರೆವೇರಿಸಲಾಯಿತು.
ಕಾರ್ಯಕ್ರಮವನ್ನು ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರು ಮನೋಜ್ ಮಿನೆಜೆಸ್ ಸರ್ ಅವರು ಉದ್ಘಾಟಿಸಿ ರಾಜ್ಯಾದ್ಯಂತ ಯಂತ್ರಶ್ರೀ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು ಒಟ್ಟು 75000 ಎಕ್ರೆ ಅನುಷ್ಠಾನ ಆಗಿದೆ, ಪೂಜ್ಯರ ಈ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಸುನಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಂತ್ರಶ್ರೀ ಯೋಜನಾಧಿಕಾರಿ ಸುಧೀರ್ ಜೈನ್, ತಾಲೂಕು ಯೋಜನಾಧಿಕಾರಿ ಸುರೇಶ್, ಯೋಜನಾಧಿಕಾರಿ ನಿಂಗಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಕಾಮಕ್ಷಿ, ಅವಿನಾಶ್, ಕೃಷಿ ಮೇಲ್ವಿಚಾರಕ ರವಿಚಂದ್ರ, ಮೇಲ್ವಿಚಾರಕ ಹರೀಶ್, ಸೇವಾಪ್ರತಿನಿಧಿಗಳಾದ ಅಶ್ವಿನಿ, ವಿನುತಾ, ಶೋಭಾ, ಅನುರಾಧ, ಉಷಾ, ಶೌರ್ಯ ವಿಪತ್ತಿನ ಮಾಸ್ಟರ್ ಮಹೇಶ್, ರಾಜೇಂದ್ರ, ಸತೀಶ್, ರಘು,ಗ್ರಾಮದ ರೈತರು ಉಪಸ್ಥಿತರಿದ್ದರು.