ಕಳಸ ಲೈವ್ ವರದಿ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಶೃಂಗೇರಿ ಜಿಲ್ಲೆ ,ಇವರ ವತಿಯಿಂದ ಕಿಗ್ಗಾದಿಂದ ನೃ ಸಿಂಹ ಪರ್ವತದ ವರೆಗೆ ರಾಮ ಸಂಕೀರ್ತನ ಭಜನೆಯಿಂದಿಗೆ ಕಾಲ್ನಡಿಗೆಯಲ್ಲಿ ಪರ್ವತ ಏರಿ ಪೂಜೆ ನಡೆಸಲು ತೀರ್ಮಾನಿಸಿದೆ ಎಂದು ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್ ತಿಳಿಸಿದ್ದಾರೆ.
ಶ್ರೀ ರಾಮನ ಜನನಕ್ಕೆ ಕಾರಣವಾದ ದಶರಥ ಮಹಾರಾಜರು ಋಷ್ಯ ಶೃಂಗ ಮುನಿಗಳಿಂದ “ಪುತ್ರಕಾಮೇಷ್ಟಿ ಯಾಗ” ನಡೆಸಿ ಅದರಿಂದ ಸಿಕ್ಕ ಪ್ರಸಾದ ರೂಪದ ಪಾಯಸ ಸೇವಿಸಿ ಕೌಸಲ್ಯ, ಸುಮಿತ್ರೆ ಮತ್ತು ಕೈಕೇಯಿ ದೇವಿ ಗರ್ಭ ಧರಿಸಿದ ವಿಷಯ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಋಷ್ಯ ಶೃಂಗ ಮಹಾ ಮನಿಗಳು ಶೃಂಗೇರಿ ಸಮೀಪದ ಕಿಗ್ಗದ ನೃಸಿಂಹ ಪರ್ವತದಲ್ಲಿ ವಾಸವಾಗಿದ್ದು. ಇಂದಿಗೂ ಮಳೆ ಪುತ್ರ ಸಂತಾನ ಹಾಗೂ ವಿವಾಹ ಪ್ರಾಪ್ತಿಗಾಗಿ ಪ್ರಸಿದ್ಧವಾಗಿರುವ ಈ ಪುಣ್ಯ ಭೂಮಿಗೆ, ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯ ಸುಸಮಯದಲ್ಲಿ ಇಲ್ಲಿಂದ ಪ್ರಸಾದ ಆಯೋದ್ಯಗೆ ತಲುಪಲಿದೆ.
ಈ ಪುಣ್ಯ ಭೂಮಿಗೆ ದಿನಾಂಕ 20/01/2023 ಶನಿವಾರ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶೃಂಗೇರಿ ಜಿಲ್ಲೆ ,ಇವರ ವತಿಯಿಂದ ಕಿಗ್ಗಾದಿಂದ ನೃ ಸಿಂಹ ಪರ್ವತದ ವರೆಗೆ ರಾಮ ಸಂಕೀರ್ತನ ಭಜನೆಯಿಂದಿಗೆ ಕಾಲ್ನಡಿಗೆಯಲ್ಲಿ ಪರ್ವತ ಏರಿ ಪೂಜೆ ನಡೆಸಲು ತೀರ್ಮಾನಿಸಿದ್ದು ಎಲ್ಲಾ ಹಿಂದೂ ಸಮಾಜದ ಬಂಧುಗಳು. ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು. ಬೆಳಿಗ್ಗೆ 8.00 ಗಂಟೆಗೆ ಕಿಗ್ಗಕ್ಕೆ ಆಗಮಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.